Publish Date: Fri, 25 Mar 2022 (08:40 IST)
Updated Date: Fri, 25 Mar 2022 (09:01 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂತನ ನಾಯಕರಾಗಿ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ. ಧೋನಿಯೇ ಅವರನ್ನು ನಾಯಕತ್ವಕ್ಕೆ ಸೂಚಿಸಿದ್ದಾರೆ.
ಇನ್ನು, ಜಡೇಜಾಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಸ್ ಕೆ ಆಟಗಾರ ಚಿನ್ನ ತಲಾ ಎಂದೇ ಖ್ಯಾತರಾಗಿದ್ದ ಸುರೇಶ್ ರೈನಾ ಜಡೇಜಾ ಆಯ್ಕೆ ಥ್ರಿಲ್ ಆಗಿದೆ. ನಾವಿಬ್ಬರೂ ಜೊತೆಯಾಗಿ ಸಿಎಸ್ ಕೆಯಲ್ಲಿ ಬೆಳೆದೆವು. ನಿನಗಿಂತ ಉತ್ತಮರು ಆ ಸ್ಥಾನಕ್ಕೆ ಬೇರೆ ಯಾರೂ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಆದರೆ ರೈನಾ ಕಾಮೆಂಟ್ ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಆ ಜಾಗದಲ್ಲಿ ನೀವಿರಬೇಕಿತ್ತು ಚಿನ್ನ ತಲಾ ಎಂದು ಕಾಮೆಂಟ್ ಮಾಡಿದ್ದಾರೆ.