Webdunia - Bharat's app for daily news and videos

Install App

ಕೊಹ್ಲಿ-ಗಂಭೀರ್ ನಡುವಿನ ಜಗಳದ ವೇಳೆ ನಡೆದಿದ್ದ ಮಾತುಕತೆ ವಿವರ ಬಹಿರಂಗ

Webdunia
ಬುಧವಾರ, 3 ಮೇ 2023 (09:24 IST)
ಲಕ್ನೋ: ಆರ್ ಸಿಬಿ-ಲಕ್ನೋ ನಡುವಿನ ಪಂದ್ಯದ ಬಳಿಕ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ನಡುವೆ ನಡೆದ ಮಾತಿನ ಚಕಮಕಿ ವೈರಲ್ ಆಗಿತ್ತು.

ಈ ವೇಳೆ ಇಬ್ಬರ ನಡುವೆ ನಡೆದಿದ್ದ ಜಗಳವೇನು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ. ಪಂದ್ಯದ ಬಳಿಕ ಲಕ್ನೋ ಆಟಗಾರ ಕೈಲ್ ಮೇಯರ್ಸ್ ಆರ್ ಸಿಬಿ ಆಟಗಾರ ಕೊಹ್ಲಿ ಬಳಿ ಬಂದು ಪಂದ್ಯದುದ್ದಕ್ಕೂ ನೀವ್ಯಾಕೆ ನನ್ನ ಮತ್ತು ನನ್ನ ತಂಡವನ್ನು ಬೈಯುತ್ತಲೇ ಇದ್ದಿರಿ ಎಂದು ಕೇಳಿದ್ದಾರೆ. ಇದಕ್ಕೆ ಕೊಹ್ಲಿ ನೀವ್ಯಾಕೆ ನನ್ನನ್ನು ದಿಟ್ಟಿಸುತ್ತಿದ್ದರಿ? ಎಂದು ಪ್ರಶ್ನಿಸಿದ್ದಾರೆ. ಆ ವೇಳೆ ಗಂಭೀರ್ ಹೆಚ್ಚು ಮಾತಕತೆ ಬೇಡವೆಂದು ಮೇಯರ್ಸ್ ರನ್ನು ಪಕ್ಕಕ್ಕೆ ಎಳೆದೊಯ್ದಿದ್ದಾರೆ.

ಈ ವೇಳೆ ಕೊಹ್ಲಿ ಕಾಮೆಂಟ್ ಮಾಡಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಯಿತು. ಆಗ ಗಂಭೀರ್ ‘ಏನು ಹೇಳಬೇಕೋ ಹೇಳು’ ಎಂದಿದ್ದಾರೆ. ಆಗ ಕೊಹ್ಲಿ ‘ನಾನು ನಿಮ್ಮ ಜೊತೆ ಮಾತನಾಡಿಯೇ ಇಲ್ಲ, ನೀವ್ಯಾಕೆ ಮಧ್ಯೆ ಮಾತನಾಡುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.

ಆಗ ಗಂಭೀರ್ ‘ನೀನು ನನ್ನ ಆಟಗಾರರಿಗೆ ಹೇಳಿದರೆ ನನ್ನ ಕುಟುಂಬಕ್ಕೆ ಹೇಳಿದಂತೆ’ ಎಂದಿದ್ದಾರೆ. ಇದಕ್ಕೆ ಕೊಹ್ಲಿ ‘ಹಾಗಿದ್ದರೆ ನಿಮ್ಮ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳಿ’ ಎಂದು ಪ್ರತ್ಯುತ್ತರ ನೀಡಿದ್ದಾರೆ. ಕೊನೆಯಲ್ಲಿ ಗಂಭೀರ್ ‘ಇನ್ಮುಂದೆ ನಾನು ನಿನ್ನಿಂದ ಕಲಿಯಬೇಕು’ ಎಂದು ಕೋಪದಿಂದ ಹೇಳಿದ್ದಾರೆ. ಈ ಮಾತಿನ ಚಕಮಕಿಯ ತಪ್ಪಿಗೆ ಈಗ ಇಬ್ಬರಿಗೂ ದಂಡ ವಿಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

ಮುಂದಿನ ಸುದ್ದಿ
Show comments