Select Your Language

Notifications

webdunia
webdunia
webdunia
webdunia

ವಿಂಡೀಸ್ ಸರಣಿಗೆ ಧೋನಿಗೆ ಕೊಕ್! ಬಿಸಿಸಿಐ ಕೆಂಗಣ್ಣಿಗೆ ಬಲಿಯಾಯಿತೇ ಧೋನಿ ವಿಕೆಟ್?!

ವಿಂಡೀಸ್ ಸರಣಿಗೆ ಧೋನಿಗೆ ಕೊಕ್! ಬಿಸಿಸಿಐ ಕೆಂಗಣ್ಣಿಗೆ ಬಲಿಯಾಯಿತೇ ಧೋನಿ ವಿಕೆಟ್?!
ಮುಂಬೈ , ಶನಿವಾರ, 27 ಅಕ್ಟೋಬರ್ 2018 (08:12 IST)
ಮುಂಬೈ: ಏಕದಿನ ಸರಣಿ ಮುಗಿದ ಬಳಿಕ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿಗೆ ಬಿಸಿಸಿಐ ಆಯ್ಕೆ ಸಮಿತಿ ಕೊಕ್ ನೀಡಿದೆ.
 

ಧೋನಿಗೆ ಕೊಕ್ ನೀಡಿರುವುದಕ್ಕೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿ ಜತೆಗೆ ನಾಯಕ ವಿರಾಟ್ ಕೊಹ್ಲಿಗೂ ವಿಶ್ರಾಂತಿ ನೀಡಲಾಗಿದೆ.

ವಿಂಡೀಸ್ ಸರಣಿಗೆ ಮೊದಲು ವಿಜಯ್ ಹಜಾರೆ ಟ್ರೋಫಿಯಲ್ಲಿ ತವರು ಜಾರ್ಖಂಡ್ ಪರ ಆಡಿ ಫಾರ್ಮ್ ಕಂಡುಕೊಳ್ಳುವಂತೆ ಧೋನಿಗೆ ಆಯ್ಕೆ ಸಮಿತಿ ಸಲಹೆ ನೀಡಿತ್ತು. ಆದರೆ ಧೋನಿ ಇದಕ್ಕೆ ಒಪ್ಪದೇ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟೇ ಅಲ್ಲದೆ, ಇದುವರೆಗೆ ಭಾರತಕ್ಕೆ ವಿಕೆಟ್ ಕೀಪರ್ ನದ್ದೇ ಸಮಸ್ಯೆಯಾಗಿತ್ತು. ಆದರೆ ಈಗ ರಿಷಬ್ ಪಂತ್ ರೂಪದಲ್ಲಿ ಆ ತಲೆ ನೋವು ದೂರವಾಗಿದೆ. ಇದೇ ಕಾರಣಕ್ಕೆ ಧೋನಿಯನ್ನು ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾರನ್ನು ಹೊಗಳಿದ್ದ ಹರ್ಭಜನ್ ಸಿಂಗ್ ಇಂದು ವರಸೆಯೇ ಬದಲು!