Publish Date: Sat, 13 Aug 2022 (08:40 IST)
Updated Date: Sat, 13 Aug 2022 (08:42 IST)
ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಸರಣಿಗೊಬ್ಬ ನಾಯಕನಾಗುತ್ತಿರುವುದು ಮಾಮೂಲಾಗಿದೆ. ಇದರ ನಡುವೆ ಕೋಚ್ ಗೂ ವಿಶ್ರಾಂತಿ ನೀಡಲಾಗುತ್ತಿದೆ.
ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ರೆಗ್ಯುಲರ್ ಕೋಚ್ ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಕೋಚಿಂಗ್ ನಲ್ಲಿ ಮೈದಾನಕ್ಕಿಳಿದಿತ್ತು.
ಇದೀಗ ಜಿಂಬಾಬ್ವೆ ವಿರುದ್ಧ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಯುವ ಪಡೆ ಏಕದಿನ, ಟಿ20 ಸರಣಿ ಆಡಲಿದ್ದು ಈ ಸರಣಿಗೆ ಖಾಯಂ ಕೋಚ್ ದ್ರಾವಿಡ್ ಗೆ ವಿಶ್ರಾಂತಿ ನೀಡಿ, ವಿವಿಎಸ್ ಲಕ್ಷ್ಮಣ್ ಕೋಚ್ ಜವಾಬ್ಧಾರಿ ನೀಡಲಾಗಿದೆ. ಈ ಮೂಲಕ ಕೋಚ್ ಗೂ ವಿಶ್ರಾಂತಿ ನೀಡಲಾಗಿದೆ.