Webdunia - Bharat's app for daily news and videos

Install App

ಅಶ್ವಿನ್ ಗೆ ಬಳಿಕ ಟೀಂ ಇಂಡಿಯಾದಿಂದ ನಿವೃತ್ತಿಯ ಡೆಡ್ ಲೈನ್ ಪಡೆದ ಕ್ರಿಕೆಟಿಗ ಇವರೇ

Krishnaveni K
ಶುಕ್ರವಾರ, 20 ಡಿಸೆಂಬರ್ 2024 (11:17 IST)
ಮೆಲ್ಬೊರ್ನ್: ಈಗಷ್ಟೇ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಬೇಸರ ಅಭಿಮಾನಿಗಳಲ್ಲಿದೆ. ಅದರ ನಡುವೆ ಈಗ ಮತ್ತೊಂದು ದೊಡ್ಡ ವಿಕೆಟ್ ಪತನವಾಗುವುದು ಗ್ಯಾರಂಟಿಯಾಗಿದೆ.
 

ಟೀಂ ಇಂಡಿಯಾದ ಹಿರಿಯ ಆಟಗಾರರಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಡೆಡ್ ಲೈನ್ ನೀಡಲಾಗಿತ್ತು ಎಂಬ ಸುದ್ದಿಗಳಿತ್ತು. ಅದರಂತೆ ಅಶ್ವಿನ್ ತಮಗೆ ಇನ್ನು ತಂಡದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಅರಿವಾದೊಡನೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಾಗೆ ನೋಡಿದರೆ ಅಶ್ವಿನ್ ಉತ್ತಮ ಲಯದಲ್ಲೇ ಇದ್ದರು. ದೇಶೀಯ ಪಿಚ್ ಗಳಲ್ಲಿ ಅವರು ಈಗಲೂ ಮ್ಯಾಚ್ ವಿನ್ನರ್. ಹೀಗಾಗಿ ಅವರ ನಿವೃತ್ತಿ ಎಲ್ಲರಿಗೂ ಬೇಸರದ ಜೊತೆಗೆ ಆಘಾತ ತಂದಿದೆ.

ಇದೀಗ ಅವರ ಬಳಿಕ ಮತ್ತೊಬ್ಬ ಆಟಗಾರನಿಗೆ ಬಿಸಿಸಿಐ ಡೆಡ್ ಲೈನ್ ನೀಡಿದೆಯಂತೆ. ಅವರು ಬೇರೆ ಯಾರೂ ಅಲ್ಲ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ. ಕ್ಯಾಪ್ಟನ್ ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯವೇ ಡೆಡ್ ಲೈನ್ ಎನ್ನಲಾಗಿದೆ. ಸಿಡ್ನಿ ಟೆಸ್ಟ್ ಒಳಗಾಗಿ ರೋಹಿತ್ ಉತ್ತಮ ಇನಿಂಗ್ಸ್ ಆಡಿದರೆ ಮುಂದೆ ಇಂಗ್ಲೆಂಡ್ ಸರಣಿ ಅವರ ಕೊನೆಯ ಸರಣಿಯಾಗಲಿದೆ. ಇಲ್ಲದೇ ಹೋದರೆ ಈ ಆಸ್ಟ್ರೇಲಿಯಾ ಸರಣಿಯ ಅಂತ್ಯಕ್ಕೆ ಅವರೂ ವಿದಾಯ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ.

ಇನ್ನೊಬ್ಬ ಹಿರಿಯ ತಾರೆ ವಿರಾಟ್ ಕೊಹ್ಲಿ ಕೂಡಾ ಉತ್ತಮ ಫಾರ್ಮ್ ಪ್ರದರ್ಶಿಸಿಲ್ಲ. ಒಂದು ವೇಳೆ ಭಾರತ ಮುಂದಿನ ಎರಡು ಟೆಸ್ಟ್ ಪಂದ್ಯಗಳನ್ನು ಸೋತು ಡಬ್ಲ್ಯುಟಿಸಿ ಫೈನಲ್ ಗೇರಲು ವಿಫಲರಾದರೆ ಕೊಹ್ಲಿಗೂ ನಿವೃತ್ತಿಗೆ ಸೂಚನೆ ಸಿಗಲಿದೆ ಎಂಬ ಮಾತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮೊನ್ನೆ ಅಶ್ವಿನ್ ನಿವೃತ್ತಿ ಘೋಷಿಸಿದಾಗಿ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಎಲ್ಲರಿಗಿಂತ ಹೆಚ್ಚು ಭಾವುಕರಾಗಿದ್ದು ಗಮನಿಸಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Gautam Gambhir: ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಗ್ಗೆ ಗೌತಮ್ ಗಂಭೀರ್ ಮಹತ್ವದ ಹೇಳಿಕೆ

Virat Kohli: ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಏನೂ ಹೇಳಿಲ್ವಾ, ಇಲ್ಲಿದೆ ಅಪ್ ಡೇಟ್

Chinnaswamy stampede: ನಮ್ಮಲ್ಲಿ ಹೀಗಾಗಿರ್ಲಿಲ್ಲಪ್ಪ, ನೋವಿನಲ್ಲೂ ಬೆಂಗಳೂರಿಗೆ ತಿವಿದ ಮುಂಬೈ ಫ್ಯಾನ್ಸ್

Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಪೊಲೀಸರಲ್ಲ ಇದೇ ಎರಡು ಕಾರಣ ಇದುವೇ

Chinnaswamy stampede: ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಲು ಬಯಸಿದ್ದ ಆರ್ ಸಿಬಿ, ಹಾಗೇನಾದ್ರೂ ಇದ್ರೆ ಏನಾಗ್ತಿತ್ತು

ಮುಂದಿನ ಸುದ್ದಿ
Show comments