Webdunia - Bharat's app for daily news and videos

Install App

ನೌಕರಿ ಕತೆ ಏನಾಯ್ತೋ?! ಉದ್ಯೋಗಸ್ಥರ ಚಿಂತೆ

Webdunia
ಭಾನುವಾರ, 19 ಏಪ್ರಿಲ್ 2020 (09:02 IST)
ಬೆಂಗಳೂರು: ಲಾಕ್ ಡೌನ್ ಪಾಲಿಸದಿದ್ದರೆ ಜೀವಕ್ಕೆ ಆಪತ್ತು. ಲಾಕ್ ಡೌನ್ ಪಾಲಿಸಿದರೆ ಜೀವನಕ್ಕೆ ಕುತ್ತು.. ಇದು ಉದ್ಯೋಗಸ್ಥರ ಸದ್ಯದ ಪರಿಸ್ಥಿತಿ.


ಕಂಪನಿ ಬಾಗಿಲು ಮುಚ್ಚಿ ಬರೋಬ್ಬರಿ ತಿಂಗಳಾಗುತ್ತಾ ಬಂದಿದೆ. ಸೋಮವಾರದಿಂದ ಐಟಿ-ಬಿಟಿ ಕಂಪನಿಗಳಿಗೆ ಶೇ. 50 ರಷ್ಟು ಹಾಜರಾತಿಯಲ್ಲಿ ಕಚೇರಿ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಐಟಿ-ಬಿಟಿಯವರು ಈಗಾಗಲೇ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ.

ಆದರೆ ಬೇರೆ ಖಾಸಗಿ ಕಂಪನಿ ಉದ್ಯೋಗಸ್ಥರಿಗೆ, ಮನೆಯಿಂದ ಕೆಲಸ ಮಾಡಲು ಸಾಧ‍್ಯವಾಗದ ನೌಕರರಿಗೆ ಭವಿಷ್ಯದ ಚಿಂತೆ ಕಾಡಿದೆ. ಇನ್ನೂ ಕೆಲವು ದಿನ ಕಂಪನಿ ಬಾಗಿಲು ಮುಚ್ಚಿದರೆ ಮುಂದೆ ತೆರೆದರೂ ಸಾಕಷ್ಟು ಕೆಲಸದ ಆರ್ಡರ್ ಸಿಗುತ್ತದೆಂಬ ನಂಬಿಕೆಯಿಲ್ಲ. ನಷ್ಟದ ಭೀತಿಯಿಂದ ಕೆಲವು ಸಣ್ಣ ಪುಟ್ಟ ಕಂಪನಿಗಳು ಈಗಾಗಲೇ ಬಾಗಿಲು ಮುಚ್ಚುವ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಲಾಕ್ ಡೌನ್ ತೆರೆದರೂ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಆಗ ನೌಕರಿಯ ಗತಿಯೇನು? ಭವಿಷ್ಯದ ಗತಿಯೇನು ಎಂಬ ಆತಂಕ ಉದ್ಯೋಗಸ್ಥರನ್ನು ಕಾಡುತ್ತಿದೆ.

ಸರ್ಕಾರ ಈಗಾಗಲೇ ಕಂಪನಿ ಮುಚ್ಚುವುದು, ನೌಕರಿಯಿಂದ ವಜಾ ಮಾಡುವುದು ಮಾಡಬೇಡಿ ಎಂದು ಮನವಿ ಮಾಡುತ್ತಲೇ ಇದೆ. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಂಪನಿಗಳು ಸರ್ಕಾರದ ಮನವಿಗೆ ಓಗೊಡುತ್ತಾರಾ ಎನ್ನುವುದೇ ಪ್ರಶ್ನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments