Select Your Language

Notifications

webdunia
webdunia
webdunia
webdunia

ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಮಾಧುರಿ ದೀಕ್ಷಿತ್ ಅವರಿಗೆ ಧನ್ಯವಾದ ಹೇಳಿದ್ದು ಯಾಕೆ…?

ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಮಾಧುರಿ ದೀಕ್ಷಿತ್ ಅವರಿಗೆ ಧನ್ಯವಾದ ಹೇಳಿದ್ದು ಯಾಕೆ…?
ಮುಂಬೈ , ಬುಧವಾರ, 21 ಮಾರ್ಚ್ 2018 (06:57 IST)
ಮುಂಬೈ : ಬಾಲಿವುಡ್ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ನಟಿ ಮಾಧುರಿ ದೀಕ್ಷಿತ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.


ಕಾರಣವೆನೆಂದರೆ ಕರಣ್ ಜೋಹಾರ್ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರ ‘ಶಿದ್ದತ್’ ನಲ್ಲಿ ನಟಿ ಶ್ರೀದೇವಿ ಅವರು ನಟಿಸಬೇಕಾಗಿತ್ತು. ಆದರೆ ಅವರು ಅಕಾಲಿಕ ಮರಣ ಹೊಂದಿದ ಕಾರಣದಿಂದ ಅವರಿಗೆ ಆಪ್ತರಾದ ನಟಿ ಮಾಧುರಿ ದೀಕ್ಷಿತ್ ಅವರನ್ನು ಈ ಚಿತ್ರಕ್ಕೆ ಆಯ್ಕೆಮಾಡಲಾಗಿತ್ತು. ಹಾಗೇ ಮಾಧುರಿ ದೀಕ್ಷಿತ್ ಅವರು ಇದಕ್ಕೆ ಒಪ್ಪಿ ಸಹಿ ಕೂಡ ಮಾಡಿದ್ದಾರೆ.


ಈ ಹಿನ್ನಲೆಯಲ್ಲಿ ಶ್ರೀ ದೇವಿ ಪುತ್ರಿ ಜಾಹ್ನವಿ ಕಪೂರ್ ಅವರು,’ ಅಭಿಷೇಕ್ ವರ್ಮನ್ ಅವರು ನಿರ್ದೇಶನ ಮಾಡುತ್ತಿದ್ದ ಹೊಸ ಚಿತ್ರ ತಮ್ಮ ತಾಯಿಯ ಹೃದಯಕ್ಕೆ ಅತ್ಯಂತ ಹತ್ತಿರವಾಗಿತ್ತು. ಆದರೆ ಇದೀಗ ಚಿತ್ರದ ಭಾಗವಾಗುತ್ತಿರುವುದಕ್ಕೆ ಮಾಧುರಿ ಜಿ ಅವರಿಗೆ ತಮ್ಮ ಹಾಗೂ ಖುಷಿ ಕಡೆಯಿಂದ ಧನ್ಯವಾದ’ ಎಂದು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್‍ಕುಮಾರ್ ಅವರು ಅಪ್ಪಾಜಿ ಸ್ಮಾರಕಕ್ಕೆ ಪದೇ ಪದೇ ಭೇಟಿ ನೀಡಲ್ಲ ಎಂದು ಹೇಳಿದ್ದು ಯಾಕೆ ಗೊತ್ತಾ?