Select Your Language

Notifications

webdunia
webdunia
webdunia
webdunia

‘ಉಪೇಂದ್ರ ರಿಯಲ್ ಹೀರೋ ಅಲ್ಲ, ರೀಲ್ ಹೀರೋ ಯಾರು ನಂಬಬೇಡಿ’

‘ಉಪೇಂದ್ರ ರಿಯಲ್ ಹೀರೋ ಅಲ್ಲ, ರೀಲ್ ಹೀರೋ ಯಾರು ನಂಬಬೇಡಿ’
ಬೆಂಗಳೂರು , ಸೋಮವಾರ, 19 ಮಾರ್ಚ್ 2018 (06:02 IST)
ಬೆಂಗಳೂರು : ನಟ ಉಪೇಂದ್ರ ಅವರ ಆಪ್ತ ಕಾರ್ಯದರ್ಶಿಯಾದ ಹಿತೇಶ್ ಎಂಬುವವರು  ಬೆಂಗಳೂರಿನ ಸುಂಕದಕಟ್ಟೆಯ ಮುದ್ದಿನಪಾಳ್ಯದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೆಪಿಜೆಪಿ ಮಹಿಳಾ ಉಪಾಧ್ಯಕ್ಷೆ ಲಲಿತಾ ಮೇರಿ ಎಂಬುವವರು ಆರೋಪಿಸಿದ್ದಾರೆ.


ಕೆಪಿಜೆಪಿ ಮಹಿಳಾ ಉಪಾಧ್ಯಕ್ಷೆ ಲಲಿತಾ ಮೇರಿ ಎಂಬುವವರು ಪಕ್ಷದ ಮಹಿಳಾ ವಾಟ್ಸಾಪ್ ಗ್ರೂಪ್‍ಗೆ ‘ಉಪೇಂದ್ರ ರಿಯಲ್ ಹೀರೋ ಅಲ್ಲ, ರೀಲ್ ಹೀರೋ ಯಾರು ನಂಬಬೇಡಿ’ ಎಂದು ಮಸೇಜ್ ಮಾಡಿದ ಹಿನ್ನಲೆಯಲ್ಲಿ ಇದನ್ನು ನೋಡಿ ಕೋಪಗೊಂಡ ಹಿತೇಶ್ ಈ ವಿಚಾರವಾಗಿ ಲಲಿತಾ ಮೇರಿ ಅವರ ಜೊತೆ ಜಗಳವಾಡಿದ್ದರು. ನಂತರ ರಾತ್ರಿ 10 ಗಂಟೆ ಸುಮಾರಿಗೆ ಸುಂಕದಕಟ್ಟೆಯ ಕೆಇಎಲ್ ಕಾಲೇಜ್ ಬಳಿ ಲಲಿತಾ ಮೇರಿ ಕಾರಿನಲ್ಲಿ ಹೋಗುತ್ತಿರುವಾಗ ಹಿತೇಶ್ ಮತ್ತು ಆತನ ಸ್ನೇಹಿತ ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಬಂದು ಹಲ್ಲೆ ಮಾಡಿ ‘ನಮ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತಾನಾಡುತ್ತೀಯಾ’ ಎಂದು ಹೇಳಿ ಪರಾರಿಯಾಗಿರುವುದಾಗಿ ಲಲಿತಾ ಮೇರಿ ಅವರು ಆರೋಪಿಸಿದ್ದಾರೆ.


ಹಾಗೇ ಈ ಘಟನೆಯ ಹಿಂದೆ ನಟ ಉಪೇಂದ್ರ ಅವರ ಕೈವಾಡ ಇದೆ ಎಂಬುವುದಾಗಿಯೂ ಕೂಡ ಆರೋಪ ಮಾಡಿದ್ದಾರೆ. ಇದೀಗ ಲಲಿತಾ ಮೇರಿ ಅವರು ಸುಂಕದಕಟ್ಟೆಯ ಲಕ್ಷ್ಮೀ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪ್ರಕರಣ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ ಗೆ ಕಿಚ್ಚ ಸುದೀಪ್ ನಿರ್ದೇಶನ!