Webdunia - Bharat's app for daily news and videos

Install App

ಟಿ ಸೀರೀಸ್ ಕಂಪನಿ ಮಾಲಿಕರ ವಿರುದ್ಧ ಸಿಡಿದೆದ್ದ ಸೋನು ನಿಗಂ

Webdunia
ಮಂಗಳವಾರ, 23 ಜೂನ್ 2020 (09:29 IST)
ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಯುವ ಗಾಯಕರ ಮೇಲೂ ತಾರತಮ್ಯ ನಡೆಯುತ್ತಿದೆ ಎಂದು ಖ್ಯಾತ ಗಾಯಕ ಯಾರ ಹೆಸರನ್ನೂ ಉಲ್ಲೇಖಿಸದೇ ಆರೋಪಿಸಿದ್ದರು.


ಆದರೆ ಆಗ ಸೋನು ಎರಡು ದೊಡ್ಡ ಮ್ಯೂಸಿಕ್ ಕಂಪನಿಗಳು ಯುವ ಗಾಯಕರಿಗೆ ಅವಕಾಶ ನೀಡುತ್ತಿಲ್ಲ ಎಂದಿದ್ದರಷ್ಟೇ ಹೊರತು ಯಾರದ್ದೂ ಹೆಸರು ಹೇಳಿರಲಿಲ್ಲ. ಆದರೆ ಇದೀಗ ಟಿ ಸೀರೀಸ್ ಮ್ಯೂಸಿಕ್ ಕಂಪನಿ ಮುಖ್ಯಸ್ಥ ಭೂಷಣ್ ಕುಮಾರ್ ವಿರುದ್ಧ ಬಹಿರಂಗವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ತನ್ನ ಚಾರಿತ್ರ್ಯ ವಧೆ ಮಾಡಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ಭೂಷಣ್ ವಿರುದ್ಧ ಸೋನು ಎಚ್ಚರಿಕೆ ನೀಡಿದ್ದಾರೆ. ಮೂರೂವರೆ ನಿಮಿಷಗಳ ಸುದೀರ್ಘ ವಿಡಿಯೋ ಪ್ರಕಟಿಸಿರುವ ಸೋನು ನಾನು ಹಿಂದೆ ಯುವ ಗಾಯಕರಿಗೆ ಅವಕಾಶ ನೀಡಿ ಎಂದು ಯಾರ ಹೆಸರೂ ಹೇಳದೇ ಮನವಿ ಮಾಡಿದ್ದೆನಷ್ಟೇ. ಆದರೆ ಈಗ ನನ್ನ ವಿರುದ್ಧ ಬೇಕೆಂದೇ ಚಾರಿತ್ರ್ಯ ವಧೆ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ನಾನೀಗ ಹೆಸರು ಹೇಳಲೇಬೇಕಾಗಿದೆ. ಇಂತಹದ್ದೆಲ್ಲಾ ಮುಂದೆ ಮಾಡಿದರೆ ನಿಮ್ಮ ಬಗ್ಗೆ ಇರುವ ವಿಡಿಯೋವನ್ನು ನನ್ನ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸುವೆ. ನೀವು ತಪ್ಪಾದ ವ್ಯಕ್ತಿಯನ್ನು ಕೆಣಕಿದ್ದೀರಿ ಎಂದು ಭೂಷಣ್ ಕುಮಾರ್ ವಿರುದ್ಧ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments