Publish Date: Mon, 01 Aug 2022 (10:20 IST)
Updated Date: Mon, 01 Aug 2022 (10:41 IST)
ಮುಂಬೈ: ಇತ್ತೀಚೆಗೆ ಜೀವ ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಜೀವ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಮನವಿ ಸಲ್ಲಿಸಿದ್ದರು. ಅದಕ್ಕೀಗ ಒಪ್ಪಿಗೆ ಸಿಕ್ಕಿದೆ.
ಪಂಜಾಬಿ ಗಾಯ ಸಿಧು ಮೂಸೆವಾಲ ಹತ್ಯೆಯ ಬಳಿಕ ಅದೇ ಗುಂಪು ಸಲ್ಮಾನ್ ಖಾನ್ ಗೂ ಜೀವ ಬೆದರಿಕೆ ಪತ್ರ ಕಳುಹಿಸಿತ್ತು.
ಇದರ ಬೆನ್ನಲ್ಲೇ ಸಲ್ಮಾನ್ ಮನೆಗೆ ಭದ್ರತೆ ಹೆಚ್ಚಿಸಲಾಗಿತ್ತು. ಅಲ್ಲದೆ ಸಲ್ಲುಮಿಯಾ ಶಸ್ತ್ರಾಸ್ತ್ರ ಪರವಾನಗಿ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು. ಇದೀಗ ಅವರಿಗೆ ಗನ್ ಲೈಸೆನ್ಸ್ ನೀಡಲಾಗಿದೆ.