Select Your Language

Notifications

webdunia
webdunia
webdunia
webdunia

ಕೊನೆಗೂ ದಕ್ಕಿತು ಆದಿವಾಸಿಗಳಿಗೊಂದು ಸೂರು; ಇದರ ಕುರಿತು ನಟ ಚೇತನ್ ಹೇಳಿದ್ದೇನು?

ಕೊನೆಗೂ ದಕ್ಕಿತು ಆದಿವಾಸಿಗಳಿಗೊಂದು ಸೂರು; ಇದರ  ಕುರಿತು ನಟ ಚೇತನ್ ಹೇಳಿದ್ದೇನು?
ಮಡಿಕೇರಿ , ಸೋಮವಾರ, 12 ಮಾರ್ಚ್ 2018 (06:41 IST)
ಮಡಿಕೇರಿ : ಆದಿವಾಸಿಗಳು ತಮಗೆ ನ್ಯಾಯಾ ಸಿಗಬೇಕೆಂದು ತೀವ್ರವಾಗ ಹೋರಾಟ ಮಾಡಿದ ನಂತರ ರಾಜ್ಯ ಸರ್ಕಾರ ಮನೆ ನಿರ್ಮಾಣ ಮಾಡಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ನಟ ಚೇತನ್ ಅವರು ಆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.


ಅಂದು ಆದಿವಾಸಿಗಳ ಜೊತೆ ಹೋರಾಟದಲ್ಲಿ ಭಾಗಿಯಾಗಿ ಅವರಿಗೆ ಪುನರ್ ವಸತಿ ಲಭ್ಯವಾಗಬೇಕು ಎಂದು ಹೋರಾಟ ನಡೆಸಿದ್ದ ನಟ ಚೇತನ್ ಅವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ ಬಸವನಹಳ್ಳಿಯಲ್ಲಿ ಆದಿವಾಸಿಗಳಿಗೆ ನಿರ್ಮಾಣವಾಗುತ್ತಿರುವ ಮನೆಗಳಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು,’ ಹೋರಾಟ ಮಾಡಿದ್ದಕ್ಕೆ ಪ್ರತಿಫಲ ದೊರೆಯುತ್ತಿದೆ. ಇದು ನನಗೆ ತೃಪ್ತಿ ತಂದಿದೆ. ಯಾವುದೇ ಸರ್ಕಾರ ಬಂದ್ರೂ ಕೇಳಿ ಪಡೆದುಕೊಳ್ಳಲು ಬಿಡಬಾರದು. ಕೇಳದೇ ಕೊಡುವ ಸರ್ಕಾರ ಮುಂದಿನ ದಿನಗಳಲ್ಲಿ ನಮಗೆ ಬೇಕು ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸೋನಂಕಪೂರ್ ಅಮೆರಿಕಾದ ಅಧ್ಯಕ್ಷ ಟ್ರಂಪ್ ಬಗ್ಗೆ ಹೀಗ್ಯಾಕೆ ಟ್ವಿಟ್ ಮಾಡಿದ್ರು!