Select Your Language

Notifications

webdunia
webdunia
webdunia
webdunia

ನಟಿ ದೀಪಿಕಾ ಪಡುಕೋಣೆ ಅವರಿಗೆ ಬೆದರಿಕೆ ಕರೆ ಹಿನ್ನೆಲೆ; ರಣವೀರ್ ಸಿಂಗ್ ಗಪ್ ಚುಪ್ ಆಗಿದ್ದಿದ್ದು ಯಾಕೆ ಗೊತ್ತಾ...?

ನಟಿ ದೀಪಿಕಾ ಪಡುಕೋಣೆ ಅವರಿಗೆ ಬೆದರಿಕೆ ಕರೆ ಹಿನ್ನೆಲೆ; ರಣವೀರ್ ಸಿಂಗ್ ಗಪ್ ಚುಪ್ ಆಗಿದ್ದಿದ್ದು ಯಾಕೆ ಗೊತ್ತಾ...?
ಮುಂಬೈ , ಭಾನುವಾರ, 11 ಫೆಬ್ರವರಿ 2018 (06:31 IST)
ಮುಂಬೈ : ದೀಪಿಕಾ ಅಭಿನಯದ ಪದ್ಮಾವತ್ ಸಿನಿಮಾ ವಿರೋಧಗಳ ನಡುವೆಯೂ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಂಡಿತು. ಆದರೆ ಈ ಮಧ್ಯ ನಟಿ ದೀಪಿಕಾ ಪಡುಕೋಣೆ ಅವರಿಗೆ ಅನೇಕ ಬೆದರಿಕೆ ಕರೆಗಳು ಬಂದಿದ್ದವು.


ಈ ಕುರಿತು ಸಂದರ್ಶನವೊಂದರಲ್ಲಿ ರಣ್‍ವೀರ್ ಸಿಂಗ್ ಅವರ ಬಳಿ ಚಿತ್ರ ಬಿಡುಗಡೆಗೂ ಮೊದಲು ದೀಪಿಕಾ ಪಡುಕೋಣೆ ಅವರಿಗೆ ಅನೇಕ ಬೆದರಿಕೆ ಕರೆಗಳು ಬಂದಿದ್ದರೂ ಕೂಡ ನೀವು ಯಾಕೆ ಪ್ರತಿಕ್ರಿಯಿಸಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಅವರು “ಸಿನಿಮಾ ಬಿಡುಗಡೆ ವೇಳೆ ದೀಪಿಕಾಗೆ ಬೆದರಿಕೆಗಳು ಬಂದಾಗ ಸಹಜವಾಗಿಯೇ ಕೋಪ ಬಂದಿತ್ತು. ಆದ್ರೆ ನಾನು ನಿರ್ಮಾಪಕರು ಹಾಗೂ ನಿರ್ದೇಶಕರು ನೀಡಿದ ಕಟ್ಟುನಿಟ್ಟಾದ ಸೂಚನೆಯನ್ನು ನಾನು ಮೀರುವಂತಿರಲಿಲ್ಲ.


ಇಂತಹ ಸಮಯದಲ್ಲಿ ಜನರು ತಿಳಿದು ಅಥವಾ ತಿಳಿಯದೆನೋ ವಿವಾದಗಳನ್ನು ಸೃಷ್ಟಿ ಮಾಡಿರುತ್ತಾರೆ. ಒಂದು ವೇಳೆ ನಾನು ಯಾವುದೇ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದರೆ ಅದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತಿತ್ತು. ಈ ಕಾರಣಕ್ಕಾಗಿ ಯಾವುದೇ ಹೇಳಿಕೆಯನ್ನು ನೀಡಲಿಲ್ಲ. ಈ ಸಿನಿಮಾದ ವಿವಾದ ನಿರ್ಮಾಪಕರು ಹಾಗೂ ನಿರ್ದೇಶಕರ ಜೀವನವನ್ನು ನಿರ್ಧಾರ ಮಾಡುವಂತದಾಗಿತ್ತು. ನನ್ನ ನಿಲುವು ಮತ್ತು ಪ್ರತಿಕ್ರಿಯೆ ಅವರಿಗೆ ಯಾವುದೇ ಹಾನಿಯನ್ನುಂಟು ಮಾಡಬಾರದೆಂದು ನಾನು ಸುಮ್ಮನಿದ್ದೆ. ಅವರು ಕೊಟ್ಟ ಆದೇಶದಂತೆ ನಾನು ನಡೆದುಕೊಂಡಿದ್ದೇನೆ” ಎಂದು ಉತ್ತರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರ ವಿವಾದದಲ್ಲಿ ಸಿಲುಕಲು ಕಾರಣವೇನು ಗೊತ್ತಾ...?