Select Your Language

Notifications

webdunia
webdunia
webdunia
webdunia

ನಟ ಸೈಫ್ ಅಲಿ ಖಾನ್ ಟ್ವಿಟ್ಟರ್ ನಲ್ಲಿ ಜನರ ಟೀಕೆಗೆ ಗುರಿಯಾಗಿದ್ದೇಕೆ..?

ನಟ ಸೈಫ್ ಅಲಿ ಖಾನ್ ಟ್ವಿಟ್ಟರ್ ನಲ್ಲಿ ಜನರ ಟೀಕೆಗೆ ಗುರಿಯಾಗಿದ್ದೇಕೆ..?
ಮುಂಬೈ , ಭಾನುವಾರ, 8 ಏಪ್ರಿಲ್ 2018 (06:49 IST)
ಮುಂಬೈ : ಈಗಾಗಲೇ ಕೃಷ್ಣಮೃಗಗಳ ಬೇಟೆಯಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಈ ಪ್ರಕರಣದಲ್ಲಿ ಖುಲಾಸೆಗೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ಅವರು ವಿವಾದವೊಂದಕ್ಕೆ ಗುರಿಯಾಗಿದ್ದಾರೆ.


ಕೃಷ್ಣ ಮೃಗಗಳ ಭೇಟೆಯಾಡಿದ ಪ್ರಕರಣದ ಐವರಲ್ಲಿ ನಾಲ್ವರನ್ನು ಜೋಧ್ಪುರ ನ್ಯಾಯಾಲಯ ಖುಲಾಸೆಗೊಳಿಸಿದ್ದು, ಈ ನಾಲ್ವರಲ್ಲಿ ಸೈಫ್ ಅಲಿ ಖಾನ್ ಅವರು ಕೂಡ ಒಬ್ಬರು. ಈ ಪ್ರಕರಣದಿಂದ ಮುಕ್ತಿ ಪಡೆದ ಸೈಫ್ ಅಲಿ ಖಾನ್ ಅವರು ಇದೀಗ ತಮ್ಮ ಕಾರ್ ಡ್ರೈವರ್ ಗೆ ಆವಾಝ್ ಹಾಕಿದ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.


ಸೈಫ್ ಅಲಿ ಖಾನ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಕಾರ್ ಡ್ರೈವರ್ ಗೆ ''ಕಾರಿನ ಗಾಜನ್ನು ಮೇಲೆ ಮಾಡಿ, ಗಾಡಿಯನ್ನ ರಿವರ್ಸ್ ತಗೋ ಇಲ್ಲಾಂದ್ರೆ ಒಂದು ಕೊಡ್ತೀನಿ'' ಎಂದು ಆವಾಝ್ ಹಾಕಿದ್ದು, ಈ ವಿಡಿಯೋವನ್ನ ಎ.ಎನ್.ಐ, ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟ ಮಾಡಿದ್ದರಿಂದ ಇದನ್ನು ನೋಡಿದ ಹಲವರು ಸೈಫ್ ಅಲಿ ಖಾನ್ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಓ ಪ್ರೇಮವೇ’ ಚಿತ್ರದ ನಾಯಕಿ ನಿಕ್ಕಿ ಗಲ್ರಾನಿ ಮೇಲೆ ಸಾ.ರಾ.ಗೋವಿಂದ್ ಕೋಪಗೊಂಡಿದ್ಯಾಕೆ…?