Select Your Language

Notifications

webdunia
webdunia
webdunia
webdunia

ರಾಮಂದಿರ ಭೂಮಿ ಪೂಜೆ ಬಗ್ಗೆ ನಟಿ ರಚಿತಾ ರಾಮ್ ಬರೆದುಕೊಂಡಿದ್ದು ಹೀಗೆ

ರಾಮಂದಿರ ಭೂಮಿ ಪೂಜೆ ಬಗ್ಗೆ ನಟಿ ರಚಿತಾ ರಾಮ್ ಬರೆದುಕೊಂಡಿದ್ದು ಹೀಗೆ
ಬೆಂಗಳೂರು , ಬುಧವಾರ, 5 ಆಗಸ್ಟ್ 2020 (12:03 IST)
ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇಂದು ಚಾಲನೆ ನೀಡುತ್ತಿರುವ ಬಗ್ಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ.


ಅದರಲ್ಲೂ ನಟಿ ರಚಿತಾ ರಾಮ್ ಜೈ ಶ್ರೀರಾಮ್ ಎಂದು ಫೋಟೋ ಪ್ರಕಟಿಸಿ, ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ, ರಾಮಮಂದಿರಕ್ಕಾಗಿ ನಡೆದ ಹೋರಾಟಕ್ಕೆ, ಎಷ್ಟೋ ತ್ಯಾಗ, ಬಲಿದಾನಗಳಿಗೆ ಇಂದು ನಿಜವಾದ ಗೆಲುವು. ಇಂದು ನಡೆಯುತ್ತಿರುವ ಮಂದಿರ ನಿರ್ಮಾಣದ ಭೂಮಿ ಪೂಜೆಯ ಬೃಹತ್ ಹೆಜ್ಜೆಯು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದ್ದಾರೆ.

ಇನ್ನು ರಾಮಮಂದಿರ ಭೂಮಿ ಪೂಜೆಗೆ ಶುಭ ಹಾರೈಸಿ ನಟ ರಾವಣ್ ಖ್ಯಾತಿಯ ಜಯರಾಮ್ ಕಾರ್ತಿಕ್, ರಕ್ಷಿತಾ ಪ್ರೇಮ್, ತಾರಾ ಅನುರಾಧ, ಜಗ್ಗೇಶ್ ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ಶಿಲಾನ್ಯಾಸದ ಬಳಿಕ ಪ್ರಧಾನಿ ಮೋದಿ ನೆಡಲಿದ್ದಾರೆ ಈ ವಿಶೇಷವಾದ ಹೂವಿನ ಗಿಡ