Select Your Language

Notifications

webdunia
webdunia
webdunia
webdunia

ವರಮಹಾಲಕ್ಷ್ಮಿಯನ್ನು ಪೂಜೆ ಮಾಡುವುದು ಕೇವಲ ಧನ ಸಂಪತ್ತಿಗಾಗಿ ಅಲ್ಲ

ವರಮಹಾಲಕ್ಷ್ಮಿಯನ್ನು ಪೂಜೆ ಮಾಡುವುದು ಕೇವಲ ಧನ ಸಂಪತ್ತಿಗಾಗಿ ಅಲ್ಲ
ಬೆಂಗಳೂರು , ಶುಕ್ರವಾರ, 5 ಆಗಸ್ಟ್ 2022 (06:11 IST)
ಬೆಂಗಳೂರು: ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಶ್ರಾವಣ ಶುಕ್ರವಾರವಾದ ಇಂದು ಮಹಾಲಕ್ಷ್ಮಿಗೆ ಅಲಂಕರಿಸಿ ಪೂಜೆ ಮಾಡುವುದು ಶ್ರೇಷ್ಠ ಎಂದು ನಂಬಲಾಗುತ್ತದೆ.

ಅದರಲ್ಲೂ ವಿಶೇಷವಾಗಿ ದೇವಿಯ ಪೂಜೆಯನ್ನು ಮಹಿಳೆಯರೇ ಮಾಡುವುದು ಈ ಹಬ್ಬದ ವಿಶೇಷ. ಸಾಮಾನ್ಯವಾಗಿ ಲಕ್ಷ್ಮಿ ಎಂದರೆ ನಮಗೆ ಕೇವಲ ಧನ ಸಂಪತ್ತಿಗೆ ಒಡತಿ ಎಂದೇ ಮನಸ್ಸಿಗೆ ಬರುವುದು.

ಆದರೆ ಇಂದು ಲಕ್ಷ್ಮಿಯನ್ನು ಪೂಜಿಸುವುದು ಕೇವಲ ಧನ ಸಂಪತ್ತನ್ನು ಒಲಿಸಿಕೊಳ್ಳುವುದಕ್ಕಾಗಿ ಮಾತ್ರವಲ್ಲ. ಧನ, ಕನಕದ ಜೊತೆಗೆ ಧೈರ್ಯ ಲಕ್ಷ್ಮಿ,ಧಾನ್ಯ ಲಕ್ಷ್ಮಿ, ಸಂತಾನ, ವಿಜಯ ಲಕ್ಷ್ಮಿ, ಸೌಮ್ಯ ಲಕ್ಷ್ಮಿಯಾಗಿಯೂ ನಮ್ಮನ್ನು ಅನುಗ್ರಹಿಸಲಿ ಎಂದು ಭಕ್ತಿಯಿಂದ ಪೂಜೆ ಮಾಡಬೇಕು. ಬೆಳಿಗ್ಗೆಯೇ ಶುದ್ಧ, ಮಡಿಯಿಂದ ಸ್ನಾನ ಮಾಡಿ ದೇವರ ಕಲಶ ಪಾತ್ರೆಯಲ್ಲಿ ಶುದ್ಧ ನೀರು ತುಂಬಿ, ದೇವರ ಮನೆಯಲ್ಲಿ ಲಕ್ಷ್ಮೀ ದೇವಿಯ ಪ್ರತಿಮೆಗೆ ಸೀರೆಯುಡಿಸಿ ಹೂವು, ಧನ, ಕನಕಗಳಿಂದ ಅಲಂಕರಿಸಿ ನೈವೇದ್ಯ ಮಾಡಿ ಗೋಧೂಳಿ ಸಮಯದಲ್ಲಿ ಪೂಜೆ ಮಾಡಿದರೆ ಒಳಿತಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ