Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬದಂದೇ ಕೊಲೆಯಾದ ಯುವಕ .."!

ಹುಟ್ಟುಹಬ್ಬದಂದೇ ಕೊಲೆಯಾದ ಯುವಕ ..
ಬೆಂಗಳೂರು , ಭಾನುವಾರ, 24 ಜುಲೈ 2022 (15:36 IST)
ಹುಟ್ಟುಹಬ್ಬದಂದೇ ಬರ್ಬರವಾಗಿ ಕೊಲೆಯಾದ ಯುವಕ ಹೇಮಂತ್ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಹೇಮಂತ್ ಕೊಲೆ ಹಿಂದೆ ಕುಖ್ಯಾತ ಪಾತಕಿಯ ಕೈವಾಡ...
 
ಬರ್ತಡೇ ಸೆಲೆಬ್ರೇಷನ್​ಗೆ‌ ಅಂತ ಸಮೀಪದ ಡಾಬಾ ವೊಂದಕ್ಕೆ ಹೋಗಿದ್ದರು. ಆ ವೇಳೆ ಹೇಮಂತ್ ಹಾಗೂ ಆತನ‌ ಸ್ನೇಹಿತ್ರ ಮಧ್ಯೆ ಬೆಂಗಳೂರಿನ‌ ರೌಡಿಸಂ ಬಗ್ಗೆ ಚರ್ಚೆ ಶುರುವಾಗಿತ್ತು, ಮಚ್ಚಾ ಬೆಂಗಳೂರಲ್ಲಿ ಯಾರು ಹೇಳಿಕೊಳ್ಳುವಂತ ರೌಡಿಗಳಿಲ್ಲ. ಎಲ್ಲ ಪುಡಿರೌಡಿಗಳೇ ಅಂತ ಮಾತನಾಡಿಕೊಂಡಿದ್ದಾರೆ. ಈ ಮಾತುಗಳು ಪಕ್ಕದಲ್ಲೇ ಇದ್ದ ನಟೋರಿಯಸ್ ರೌಡಿ ಕುಳ್ಳು ರಿಜ್ವಾನ್‌ ಶಿಷ್ಯರ ಕಿವಿಗೆ ಬಿದ್ದಿದೆ. ಆದ್ರೂ ಸುಮ್ಮನಿದ್ದ ರಿಜ್ವಾನ್ ಸಹಚರರು ಪಾರ್ಟಿ ಮುಗಿಸಿ ಹೇಮಂತ್ ಸ್ನೇಹಿತರು ತಮ್ಮ ತಮ್ಮ ಮನೆಗಳಿಗೆ ಹೋಗ್ತಿದ್ದಂತೆ, ಹೇಮಂತ್ ತನಗರಿವಿಲ್ಲದಂತೆ ಆ ರೌಡಿಗಳ ಬಳಿಯೇ ಮನೆ ಹತ್ತಿರ ಎಲ್ಲಾದ್ರೂ ಡ್ರಾಪ್​ ಮಾಡುವಂತೆ ಕೇಳಿದ್ದಾನೆ.
 
ಅವರಿಗೂ ಅದೇ ಬೇಕಿತ್ತು. ನೈಸಾಗಿ ಹೇಮಂತ್ ನನ್ನ ಬೈಕ್‌ನಲ್ಲಿ ಕರೆದುಕೊಂಡು ಬಂದ ಆರೋಪಿಗಳು ಹೇಮಂತ್ ಜೊತೆ ಕಿರಿಕ್ ಶುರು ಮಾಡಿದ್ದಾರೆ. ನಮ್ ಬಾಸ್ ಕುಳ್ಳು ರಿಜ್ವಾನ್ ಗೊತ್ತಿಲ್ವೇನೋ ಅಂತ ಮದಿರೆ ನಿಶೆಯಲ್ಲಿ ಜಗಳ ತೆಗೆದಿದ್ದಾರೆ. ನಮ್ ಬಾಸ್ ಗೊತ್ತಿಲ್ಲ ಅಂತೀಯ. ನಿನಗೆ ಒಂದ್ ಗತಿ ಕಾಣಿಸ್ತೀವಿ ಅಂತೇಳಿ ಮಾರಕಾಸ್ತ್ರಗಳಿಂದ ಹೇಮಂತ್ ಮೇಲೆ ಹಲ್ಲೆ ಮಾಡಿದೆ. ಬಳಿಕ ಆತನ ಮುಖ ಗುರುತು ಸಿಗದಂತೆ ಮಚ್ಚಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಕೊಲೆ ಮಾಡುವ ದೃಶ್ಯಗಳನ್ನು ಹಂತಕರೇ ಮೊಬೈಲ್‌ನಲ್ಲಿ ಸೆರೆ ಹಿಡಿದು, ಅದನ್ನು ಕುಳ್ಳು ರಿಜ್ವಾನ್ ಮೊಬೈಲ್‌ಗೆ ಕಳುಹಿಸಿದ್ದಾರೆ. ಬಾಸ್ ನೀವ್ ಗೊತ್ತಿಲ್ಲ ಅಂದಿದಕ್ಕೆ ಅವ್ನ ಕಥೆಯೇ ಮುಗಿಸ್ಬಿಟ್ವಿ ಅಂತ ಮೇಸೇಜ್ ಹಾಕಿದ್ರಂತೆ. ಕೆ.ಜಿ.ನಗರ ಪೊಲೀಸರು ಕುಳ್ಳು ರಿಜ್ವಾನ್ ನನ್ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ರಿಜ್ವಾನ್ ಮೊಬೈಲ್ ನಲ್ಲಿ ವಿಡಿಯೋ ಸಿಕ್ಕಾಗ ಈ ಸಂಗತಿ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

15 ವರ್ಷದ ಹುಡುಗ ಲಕ್ಷ ಸಂಬಳದ ಪ್ಯಾಕೇಜ್ ಸಂಬಳದ ಆಫರ್ ..ಏನಿದು ???