Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 30 ಅಕ್ಟೋಬರ್ 2019 (09:09 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವ್ಯಾಪಾರಿಗಳಿಗೆ ತೀವ್ರ ಪೈಪೋಟಿ ಕಂಡುಬರುವುದು. ಸಂಗಾತಿಯ ಮಾತಿಗೆ ಕಿವಿಗೊಟ್ಟು ಮುಂದಿನ ಹೆಜ್ಜೆಯಿಟ್ಟರೆ ಒಳಿತಾಗುವುದು. ವಿದ್ಯಾರ್ಥಿಗಳಿಗೆ ಕಠಿಣ ಪ್ರಯತ್ನ ಅಗತ್ಯವಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಗೃಹೋಪಯೋಗಿ ವಸ್ತುಗಳಿಗಾಗಿ ಧನವಿನಿಯೋಗ ಮಾಡಬೇಕಾಗುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡುವಾಗಲೂ ನೂರು ಬಾರಿ ಯೋಚಿಸಿ ಹೆಜ್ಜೆಯಿಡಬೇಕಾದ ದಿನವಿದು. ಸಂಗಾತಿಯ ಸಲಹೆಗಳು ಉಪಯೋಗಕ್ಕೆ ಬರಲಿವೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ ಕಾದಿದೆ.

ಮಿಥುನ: ಮಕ್ಕಳ ನಡುವಿನ ಸಂಘರ್ಷದಿಂದ ಹಿರಿಯರ ಮನಸ್ಸಿಗೆ ಚಿಂತೆಯಾಗುವುದು. ನೆರೆಹೊರೆಯವರ ಚಾಡಿ ಮಾತಿಗೆ ಬಲಿಯಾಗಬೇಕಾಗುತ್ತದೆ. ತಾಳ್ಮೆ ಅತೀ ಅಗತ್ಯ. ವೃತ್ತಿರಂಗದಲ್ಲಿ ಕೆಳಹಂತದ ನೌಕರರಿಗೆ ಮುನ್ನಡೆಯಿದೆ. ಆರ್ಥಿಕವಾಗಿ ಆದಾಯದಲ್ಲಿ ಕುಂಠಿತವಾಗಬಹುದು.

ಕರ್ಕಟಕ: ಸಂಗಾತಿಯ ವಿಲಾಸಿ ಪ್ರವೃತ್ತಿ ಚಿಂತೆಗೆ ಕಾರಣವಾಗಬಹುದು. ಆರ್ಥಿಕವಾಗಿ ಹಲವು ಖರ್ಚು ವೆಚ್ಚಗಳು ಚಿಂತೆ ಹೆಚ್ಚಿಸಲಿವೆ. ನೌಕರ ವರ್ಗದವರಿಗೆ ಅನಿರೀಕ್ಷಿತವಾಗಿ ಬಡ್ತಿ, ವೇತನ ಹೆಚ್ಚಳ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಸಿಂಹ: ವೈವಾಹಿಕ ಜೀವನದಲ್ಲಿ ಇದುವರೆಗೆ ಇದ್ದ ತೊಂದರೆ, ಸಮಸ್ಯೆಗಳು ನಿವಾರಣೆಯಾಗುವುದು. ಹಿರಿಯರ ತೀರ್ಥ ಯಾತ್ರೆಗೆ ಏರ್ಪಾಟು ಮಾಡುವಿರಿ. ವ್ಯವಹಾರ ಕ್ಷೇತ್ರದಲ್ಲಿರುವವರಿಗೆ ಅನೇಕ ಅಡೆತಡೆಗಳು ತೋರಿಬಂದೀತು. ಬಂಧುಗಳ ಸಹಕಾರ ಸಿಗಲಿದೆ.

 
ಕನ್ಯಾ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನೇಕ ಏಳು ಬೀಳುಗಳು ಎದುರಾದೀತು. ಅವಿವಾಹಿತರಿಗೆ ಯಾವುದೋ ಒಂದು ವಿಘ್ನವಾಗಿ ನಿಶ್ಚಿತ ವಿವಾಹವು ಮುರಿದುಬೀಳಬಹುದು. ಆಗುವುದೆಲ್ಲಾ ಒಳ್ಳೆಯದಕ್ಕೇ ಅಂದುಕೊಳ್ಳಿ. ಚಿಂತೆ ಬೇಡ. ಮುಂದೆ ಶುಭ ಫಲವಿದೆ.

ತುಲಾ: ಗೃಹ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಕಾಲ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳ ಗುಟ್ಟು ಬಹಿರಂಗವಾಗಲಿದೆ. ಕಲಾ ಕ್ಷೇತ್ರದಲ್ಲಿರುವವರಿಗೆ ಹೆಸರು, ಖ್ಯಾತಿ ಬರಲಿದೆ. ಸಾಮಾಜಿಕವಾಗಿ ಪ್ರಶಂಸೆಗೊಳಗಾಗುವಿರಿ.

ವೃಶ್ಚಿಕ: ಇಷ್ಟಾರ್ಥ ಈಡೇರಿಕೆಗೆ ವಿಳಂಬವಾದರೂ ನಿಮ್ಮ ಕೈ ಜಾರಿ ಹೋಗದು ಎಂಬ ನಂಬಿಕೆಯಿರಲಿ. ದೇಹಾರೋಗ್ಯದಲ್ಲಿ ಏರುಪೇರಾಗಿ ಕಳವಳವಾದೀತು. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.

ಧನು: ನಿಮ್ಮ ಆತ್ಮಸ್ಥೈರ್ಯವೇ ನಿಮಗೆ ಶ್ರೀರಕ್ಷೆಯಾಗಲಿದೆ. ವ್ಯವಹಾರದಲ್ಲಿ ನೂರು ಅಡೆತಡೆಗಳು ಬಂದರೂ ಅದನ್ನು ಮೀರಿ ಮುನ್ನಡೆಯುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಅಭ್ಯಾಸದ ಅಗತ್ಯವಿದೆ. ನಿಮ್ಮ ಅಭಿಮಾನ ಭಂಗವಾಗುವ ಘಟನೆಗಳು ನಡೆಯಬಹುದು. ತಾಳ್ಮೆಯಿರಲಿ.

ಮಕರ: ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಸಂತಾನಾಪೇಕ್ಷಿತ ದಂಪತಿಗಳಿಗೆ ಶುಭ ಫಲ ಸಿಗುವುದು. ಕೃಷಿ ಕ್ಷೇತ್ರದಲ್ಲಿರುವರಿಗೆ ವ್ಯವಹಾರದಲ್ಲಿ ನಿಧಾನಗತಿಯಿದ್ದರೂ ನಷ್ಟವಾಗದು. ಆಕಸ್ಮಿಕವಾಗಿ ಧನಲಾಭವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಬಹುದು.

ಕುಂಭ: ಸ್ವಯಂ ವೃತ್ತಿಯವರಿಗೆ ನಿವ್ವಳ ಲಾಭ ಕೈಗೆ ಬರುವುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು, ಎಚ್ಚರಿಕೆ ಅಗತ್ಯ. ಇಷ್ಟಮಿತ್ರರ ಭೇಟಿಯಾಗುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸುವಿರಿ. ಹಿರಿಯರ ಸಲಹೆಗೆ ಕಿವಿಗೊಡಿ.

ಮೀನ: ಇಂಜಿನಿಯರಿಂಗ್ ವೃತ್ತಿಯವರಿಗೆ ಇಂದು ಮುನ್ನಡೆಯ ಲಾಭವಾಗಲಿದೆ. ಮಹಿಳಾ ಉದ್ಯೋಗಗಿಳಿಗೆ ಅಪವಾದದ ಭೀತಿಯಿದೆ. ಎಚ್ಚರಿಕೆ ಅಗತ್ಯ. ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಳೆದುಕೊಳ್ಳಬೇಡಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗೆ ಎದ್ದ ತಕ್ಷಣ ಹೆಂಡತಿ ಮಾಡುವ ಈ ಕೆಲಸದಿಂದ ಗಂಡನಿಗೆ ಯಶಸ್ಸು ಸಿಗುತ್ತದೆ