Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2019 (07:54 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ಆದರೆ ಸೂಕ್ತ ಅವಕಾಶ ಸಿಗದೇ ನಿರಾಸೆ ಅನುಭವಿಸುವಿರಿ. ಸಾಂಸಾರಿಕವಾಗಿ ಕುಟುಂಬ ಸದಸ್ಯರ ಸಹಕಾರ ಸಿಗಲಿದೆ. ಸಮಾಜದಲ್ಲಿ ಗೌರವ ಸಂಪಾದಿಸುತ್ತೀರಿ.

ವೃಷಭ: ವಿದ್ಯಾರ್ಥಿಗಳಿಗೆ ಆಲಸ್ಯತನ ಕಾಡಲಿದೆ. ತಾಂತ್ರಿಕ ವೃತ್ತಿಯಲ್ಲಿರುವವರಿಗೆ ಕೆಲಸದೊತ್ತಡ ಹೆಚ್ಚಾಗಲಿದ್ದು, ದೇಹಾಯಾಸವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆದಾಯದಷ್ಟೇ ಖರ್ಚುಗಳೂ ತಲೆದೋರಲಿವೆ.

ಮಿಥುನ: ಆಸ್ಥಿ, ಮನೆ ಖರೀದಿ ವ್ಯವಹಾರ ಮಾಡಲು ಸಕಾಲ. ಆದರೆ ವಂಚನೆಗೊಳಗಾದಂತೆ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗದೇ ನಿರಾಸೆಯಾಗಬಹುದು. ದೂರ ಸಂಚಾರ ಯೋಗವಿದ್ದು, ಎಚ್ಚರಿಕೆ ಅಗತ್ಯ.

ಕರ್ಕಟಕ: ನಿಮ್ಮ ಶತ್ರುಗಳೂ ಅಸೂಯೆಪಡುವಂತೆ ಕೆಲಸದಲ್ಲಿ, ವ್ಯವಹಾರದಲ್ಲಿ ಜಯ ಗಳಿಸುವಿರಿ. ಆರ್ಥಿಕ ಲಾಭ ಪಡೆಯುವಿರಿ. ಆದರೆ ಶೀತ ಸಂಬಂಧೀ ರೋಗಗಳು ಬಂದು ಆರೋಗ್ಯ ಕೈಕೊಡುವುದು. ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ.

ಸಿಂಹ: ಹಿರಿಯರ ಆರೋಗ್ಯ ಕೈಕೊಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ವೃತ್ತಿರಂಗದಲ್ಲಿ ವಿನಾಕಾರಣ ತೊಂದರೆಗೆ ಸಿಲುಕಿಕೊಳ್ಳಲಿದ್ದೀರಿ. ಎಚ್ಚರಿಕೆ ಅಗತ್ಯ.

ಕನ್ಯಾ: ಯಾವುದೇ ಕೆಲಸಕ್ಕೆ ಹೊರಟರೂ ವಿಘ್ನಗಳು ಎದುರಾಗಿ ನಿಮ್ಮ ಮೇಲೆಯೇ ಬೇಸರ ಮೂಡುವುದು. ಆರ್ಥಿಕವಾಗಿ ಆದಾಯ ಗಳಿಸುವಿರಾದರೂ ಚಿಂತೆಗೆ ಕೊನೆಯಿರದು. ಚಂಚಲ ಮನಸ್ಸು ನಿಮ್ಮದಾಗುವುದು. ತಾಳ್ಮೆಯಿಂದಿರಿ.

ತುಲಾ: ನಿಮ್ಮ ಪರೋಪಮಕಾರಿ ಸ್ವಭಾವವೇ ನಿಮಗೆ ಮುಳುವಾದೀತು. ವಂಚನೆಗೊಳಗಾಗುವ ಸಂಭವವಿದೆ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳು ನಿಮ್ಮದಾಗಲಿವೆ.

ವೃಶ್ಚಿಕ: ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಸಂತೋಷ ಪಡೆಯುವಿರಿ. ವೃತ್ತಿರಂಗದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ತಪ್ಪದು. ಖರ್ಚು ವೆಚ್ಚಗಳು ಅಧಿಕವಾಗಿ ಚಿಂತೆಗೆ ಕಾರಣವಾಗಿಲಿದೆ. ಉದ್ಯೋಗ ಬದಲಾವಣೆಗೆ ಚಿಂತನೆ ಮಾಡುವಿರಿ.

ಧನು: ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ವಿದ್ಯಾರ್ಥಿಗಳಿಗೆ ಆಲಸ್ಯವೇ ಮುಳುವಾಗಲಿದೆ. ನೆರೆಹೊರೆಯವರೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಸಿದ್ಧತೆ ಮಾಡಬೇಕಾಗುತ್ತದೆ. ಜವಾಬ್ಧಾರಿಗಳು ಹೆಚ್ಚುವುದು.

ಮಕರ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಯೋಗವಿದೆ. ಕೌಟುಂಬಿಕವಾಗಿ ಖರ್ಚುಗಳು ಅಧಿಕವಾಗಿದ್ದರೂ ನೆಮ್ಮದಿಗೆ ಕೊರತೆಯಿಲ್ಲ. ಸಂಗಾತಿಯೊಂದಿಗೆ ಸುಂದರ ಕ್ಷಣ ನಿಮ್ಮದಾಗುವುದು.  ಉದ್ಯೋಗದಲ್ಲಿ ಬಡ್ತಿ ಯೋಗವಿದೆ.

ಕುಂಭ: ಆರ್ಥಿಕವಾಗಿ ಆದಾಯಕ್ಕೆ ಕೊರತೆಯಾಗದು. ಆದರೆ ವಿನಾಕಾರಣ ಅಪವಾದ, ಚಾಡಿ ಮಾತಿಗೆ ಆಹಾರವಾಗುವಿರಿ. ಕೃಷಿಕರಿಗೆ ಲಾಭವಾಗುವುದು. ಮೇಲ್ವರ್ಗದ ಅಧಿಕಾರಿಗಳಿಗೆ ಕೊಂಚ ಹಿನ್ನಡೆಯಾದೀತು. ಮುಂದೆ ಒಳ್ಳೆಯ ದಿನಗಳಿವೆ.

ಮೀನ: ಆಸ್ಥಿ ಸಂಬಂಧವಾಗಿ ದಾಯಾದಿ ಕಲಹಗಳು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಪರಿಹರಿಸುವುದು ಸೂಕ್ತ. ಹಲವು ಖರ್ಚು ವೆಚ್ಚಗಳು ತೋರಿಬಂದೀತು. ಆದರೆ ಅನಿರೀಕ್ಷಿತವಾಗಿ ಶುಭ ಸುದ್ದಿಯೊಂದು ಬಂದು ಕಷ್ಟಗಳು ಪರಿಹಾರವಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

Share this Story:

Follow Webdunia kannada

ಮುಂದಿನ ಸುದ್ದಿ

ಗುರುವಾರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ