Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 7 ಜನವರಿ 2019 (08:49 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಸಾಂಸಾರಿಕವಾಗಿ ಹೊಂದಾಣಿಕೆ ಕೊರತೆಯಿಂದ ಸಂಗಾತಿ ಜತೆ ಮನಸ್ತಾಪ ಮಾಡಿಕೊಳ್ಳುವಿರಿ. ಆರೋಗ್ಯ ಹದತಪ್ಪುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

ವೃಷಭ: ದೂರ ಸಂಚಾರ ಯೋಗವಿದ್ದು, ಬಂಧು ಮಿತ್ರರ ಜತೆಗೆ ಪ್ರವಾಸ ಕೈಗೊಳ್ಳುವಿರಿ. ಆದರೆ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಹೊಸ ವ್ಯವಹಾರಕ್ಕೆ ಕೈ ಹಾಕಿದರೆ ಲಾಭ ಪಡೆಯುವಿರಿ. ನಿರೀಕ್ಷಿತ ಮುನ್ನಡೆ ಪಡೆಯುತ್ತೀರಿ.

ಮಿಥುನ: ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಅನುಭವಿಸಬೇಕಾದೀತು. ವಿದ್ಯಾರ್ಥಿಗಳಿಗೆ ಅತೀವ ಪ್ರಯತ್ನ ಪಟ್ಟರೆ ಮಾತ್ರ ಯಶಸ್ಸು. ಕುಟುಂಬದಲ್ಲಿ ಸಮಾಧಾನ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಕರ್ಕಟಕ: ಉದ್ಯೋಗದಲ್ಲಿ ಮುನ್ನಡೆ ದೊರಕೀತು. ನೀವು ಮಾಡಿದ ಕೆಲಸಕ್ಕೆ ಮನ್ನಣೆ ಸಿಕ್ಕಿ ಸಂತಸ ಅನುಭವಿಸುವಿರಿ. ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದುವಿರಿ. ಮನೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವಿರಿ.

ಸಿಂಹ: ಸಂಗಾತಿ ಜತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಸಂಸಾರದಲ್ಲಿ ತಾಳಮೇಳ ತಪ್ಪಲಿದೆ. ವಿದ್ಯಾರ್ಥಿಗಳು ಆಲಸಿಗಳಾಗುವರು. ಬಾಯ್ತಪ್ಪಿ ಆಡುವ ಮಾತು ಕಲಹಕ್ಕೆ ಕಾರಣವಾದೀತು. ದೂರ ಸಂಚಾರ ಯೋಗವಿದೆ.

ಕನ್ಯಾ: ಆರ್ಥಿಕ ಲಾಭವಾಗಲಿದೆ. ಎಷ್ಟೋ ದಿನದಿಂದ ಬಾಕಿಯಿದ್ದ ಸಾಲ ಮರುಪಾವತಿಯಾಗಲಿದೆ. ಆದರೆ ಕೈಗೊಳ್ಳುವ ಕಾರ್ಯಗಳಲ್ಲಿ ವಿಘ್ನಗಳು ಎದುರಾಗಬಹುದು. ಆರೋಗ್ಯವೂ ಕೊಂಚ ಕೈ ಕೊಟ್ಟೀತು.

ತುಲಾ: ಸಂಗಾತಿಯಿಂದ ದೂರವಿದ್ದು ವಿರಹ ವೇದನೆ ಅನುಭವಿಸುವಿರಿ. ವೃತ್ತಿಯಲ್ಲಿ ಮುನ್ನಡೆ ಸಾಧಿಸುವಿರಿ. ಆದರೆ ಖರ್ಚುವೆಚ್ಚಗಳು ಅಧಿಕವಾಗಲಿದೆ. ದೂರ ಸಂಚಾರ ಮಾಡುವಿರಿ.

ವೃಶ್ಚಿಕ: ಯಾವುದೇ ಕೆಲಸ ಮಾಡಬೇಕಾದರೂ ಹಣವಿಲ್ಲದೇ ಪರದಾಡಬೇಕಾದೀತು. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಆದರೆ ಉದ್ಯೋಗದಲ್ಲಿ ಮುನ್ನಡೆ ಲಭಿಸುತ್ತದೆ.

ಧನು: ಹಿರಿಯರ ಕೋಪಕ್ಕೆ ಗುರಿಯಾಗುವಿರಿ. ನಿಮಗೆ ಅರಿವಿಲ್ಲದೇ ಮಾಡುವ ತಪ್ಪು ಸಂಬಂಧವನ್ನು ಹಾಳು ಮಾಡಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ. ಹೊಸ ಜನರ ಸಂಪರ್ಕ ಮಾಡುವಿರಿ.

ಮಕರ: ಕಾರ್ಯದೊತ್ತಡದ ನಿಮಿತ್ತ ದೂರ ಸಂಚಾರ ಮಾಡುವಿರಿ. ಸಂಗಾತಿ ಜತೆಗೆ ಸರಸಮಯ ಕ್ಷಣ ಕಳೆಯುವಿರಿ. ಆದರೆ ಖರ್ಚು ವಿಪರೀತವಾಗಿ, ಹಿಡಿತ ಅಗತ್ಯವಿದೆ.

ಕುಂಭ: ಆದಾಯದಷ್ಟೇ ಖರ್ಚುಗಳೂ ಮಿತಿ ಮೀರಿ ಮನಸ್ಸಿಗೆ ನೆಮ್ಮದಿ ಇರದು. ಸಂತಾನ ಭಾಗ್ಯಕ್ಕಾಗಿ ಪರಿತಪಿಸುತ್ತಿರುವವರಿಗೆ ಶುಭ ಸುದ್ದಿ ಕೇಳಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ಮೀನ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಅಚ್ಚರಿಯ ವಾರ್ತೆ ಕೇಳುವಿರಿ. ಅನಿರೀಕ್ಷಿತವಾಗಿ ಧನ ಲಾಭವಾಗಲಿದೆ. ಅವಿವಾಹಿತರಿಗೆ ಕಂಕಣ ಬಲ ಒದಗಿ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಹ ದೋಷ ನಿವಾರಣೆಯಾಗಲು ಸೂರ್ಯಾಸ್ತದ ನಂತರ ಹೀಗೆ ಮಾಡಿ