Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯ ಹೀಗಿದೆ
ಬೆಂಗಳೂರು , ಗುರುವಾರ, 23 ಜುಲೈ 2020 (07:44 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ: ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ಕೆಟ್ಟ ಚಟಗಳನ್ನು ಬಿಡಿ. 

*ವೃಷಭ ರಾಶಿ: ನಿಮಗೆ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಬರಲು , ಕೆಲಸಗಳನ್ನು ಮಾಡಲು ಇದು ಒಂದು ಅದ್ಭುತ ದಿನ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಇತರರ ಅವಶ್ಯಕತೆಗಳನ್ನು ತಿಳಿಯಲು ಪ್ರಯತ್ನಿಸಿ.

*ಮಿಥುನ ರಾಶಿ : ನೀವು ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು.ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ. ಮತ್ತು ದಿನವಿಡೀ ನಿಮ್ಮಲ್ಲಿ ಶಕ್ತಿ ಉಳಿದಿರುತ್ತದೆ.

*ಕಟಕ ರಾಶಿ : ನಿಮ್ಮ ಚೈತನ್ಯವನ್ನು ಪುನಃ ಸಂಪಾದಿಸಲು ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ತಂದೆಯ ಯಾವುದೇ ಸಲಹೆ ಇಂದು ಕೆಲಸದ ಸ್ಥಳದಲ್ಲಿ ನಿಮಗೆ ಹಣದ ಪ್ರಯೋಜನವನ್ನು ನೀಡುತ್ತದೆ.

*ಸಿಂಹ ರಾಶಿ : ಆಶಾವಾದಿಗಳಾಗಿರಿ. ಜೀವನದಲ್ಲಿ ಉತ್ತಮ ದಿನಗಳು ಬರುವುದೆಂಬ ಆತ್ಮವಿಶ್ವಾಸವನ್ನಿಟ್ಟುಕೊಳ್ಳಿರಿ. ನಿಮ್ಮ ಈ ನಿರೀಕ್ಷೆಗಳು ನಿಮ್ಮ ಭರವಸೆ ಮತ್ತು ಆಸೆಗಳನ್ನು ಈಡೇರಿಸಲು ಸಹಾಯ ಮಾಡುತ್ತವೆ. ಗಡಿಬಿಡಿಯ ನಿರ್ಧಾರ ತೆಗೆದುಕೊಳ್ಳಬೇಡಿ.

*ಕನ್ಯಾ ರಾಶಿ : ಇಂದು ನೀವು ಭವಿಷ್ಯಕ್ಕಾಗಿ ಉತ್ತಮ ಯೋಜನೆಗಳನ್ನು ಯೋಚಿಸಬಹುದು. ಆದರೆ ಸಂಜೆಯ ವೇಳೆಗೆ ಮನೆಗೆ ಬರುವ ದೂರದ ಸಂಬಂಧಿಯಿಂದ ನಿಮ್ಮ ಯೋಜನೆಗಳು ಹಾಳಾಗಬಹುದು.

*ತುಲಾ ರಾಶಿ : ನೀವು ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಇದು ನಿಮ್ಮನ್ನ ಕ್ರೀಡಾ ಸ್ಪರ್ಧೆಗಳಲ್ಲಿ ಭಾಹವಹಿಸಲು ಸಕ್ರಿಯಗೊಳಿಸುತ್ತದೆ.

*ವೃಶ್ಚಿಕ ರಾಶಿ ಒಂದು ಒತ್ತಡದ ಹೊರತಾಗಿ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಇಂದು ನೀವು ಏನೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ.

*ಧನು ರಾಶಿ : ನಿಮ್ಮ ಮಹತ್ವಾಕಾಂಕ್ಷೆ ಮತ್ತು ಆಕಾಮಕ್ಷೆಗಳು ಭಯದಿಂದ ಹಾನಿಗೊಳಗಾಗುವ ಸಾಧ್ಯತೆಗಳಿವೆ, ಇದನ್ನು ನಿಭಾಯಿಸಲು ನಿಮಗೆ ಸರಿಯಾದ ಸಲಹೆ ಬೇಕು.

*ಮಕರ ರಾಶಿ : ನಿಮ್ಮಲ್ಲಿ ಶಕ್ತಿಯ ಕೊರತೆಯಿರದೇ ಆತ್ಮವಿಶ್ವಾಸದ ಕೊರತೆಯಿರುವುದರಿಂದ ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಿ.

*ಕುಂಭ ರಾಶಿ : ನಿಮ್ಮ ಬಗ್ಗೆ ನೀವೇ ಒಳ್ಳೆಯ ಅಭಪ್ರಾಯ ಇಟ್ಟುಕೊಳ್ಳುವುದು ಮುಖ್ಯ. ಇದನ್ನು ದಿವವೂ ರೂಢಿಮಾಡಿಕೊಳ್ಳಿ. ಆರ್ಶಿರ್ವಾದ ಹಾಗೂ ಅದೃಷ್ಟ ನಿಮ್ಮ ಬಳಿ ಬರುತ್ತಿದ್ದ ಹಾಗೇ. ನಿಮ್ಮ ಬಯಕೆಗಳು ಪೂರೈಸಲ್ಪಡುತ್ತದೆ

* ಮೀನ ರಾಶಿ : ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನ ಭಾವುಕರನ್ನಾಗಿಸಬಹುದು. ಆದರೆ ನಿಮಗೆ ಮುಖ್ಯವಾದವರಿಗೆ ನೀವು ನಿಮ್ಮ ಭಾವನೆಗಳನ್ನು ಹೇಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 17ರಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?