Publish Date: Sun, 22 Apr 2018 (06:12 IST)
Updated Date: Sun, 22 Apr 2018 (06:14 IST)
ಬೆಂಗಳೂರು : ಶನಿ ದೇವರನ್ನು ಪೂರ್ಣವಾಗಿ ತಿಳಿಯದವರು, ಆತನಿಗೆ ಬಹಳ ಹೆದರುತ್ತಾರೆ. ಆದರೆ, ಒಂದು ವೇಳೆ ಶನಿ ಅನುಗ್ರಹಿಸಿದರೆ, ಜೀವನ ಆನಂದಮಯ ವಾಗಿರುತ್ತದೆ. ಒಬ್ಬ ಮನುಷ್ಯನಿಗೆ ಬೇಕಾದಂತಹ ಸಕಲವನ್ನೂ ಶನಿ ಕರುಣಿಸಬಲ್ಲ. ಅದೇ ರೀತಿ ಶನಿ ದೇವರಿಗೆ ಕೋಪ ಬಂತೆಂದರೆ, ಅದನ್ನು ತಡೆದುಕೊಳ್ಳಲಾರ. ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕಷ್ಟಗಳಲ್ಲಿ ಮುಳಗ ಬೇಕಾಗುತ್ತದೆ. ಇಷ್ಟಕ್ಕೂ ನಾವು ಯಾವ ತಪ್ಪುಗಳನ್ನು ಮಾಡಿದರೆ ಶನಿ ಕ್ಷಮಿಸಲಾರ ಎನ್ನುವುದನ್ನು ತಿಳಿದುಕೊಳ್ಳೋಣ.
*ಮಾನವನ ಜೀವನದಲ್ಲಿ ಎಲ್ಲವೂ ಸರಿಯಿದ್ದರೆ, ದೇವರನ್ನು ಆರಾಧಿಸುತ್ತಾನೆ, ಹೊಗಳುತ್ತಾನೆ. ಅದೇ ಪರಿಸ್ಥಿತಿ ಸರಿಯಿಲ್ಲದಿರುವಾಗ ದೇವರನ್ನು ಬಯ್ಯುತ್ತಾನೆ. ಅಂತಹ ಕೆಲಸಗಳನ್ನು ಮಾಡಿದಲ್ಲಿ ಶನಿ ದೇವರಿಗೆ ಕೋಪ ಬರುತ್ತದೆ.
*ಶನಿವಾರ ತಪ್ಪದೆ ಶನಿ ದೇವರಿಗೆ ದೀಪ ಬೆಳಗಬೇಕು. ಇಲ್ಲದಿದ್ದಲ್ಲಿ ಆತ ಕೋಪಗೊಳ್ಳುತ್ತಾನೆ.
*ಚರ್ಮದ ವಸ್ತುಗಳನ್ನು ಧರಿಸಿ ಪೂಜೆ ಮಾಡಿದಲ್ಲಿ ಶನಿ ಕೋಪಗೊಳ್ಳುತ್ತಾನೆ.
*ಕೆಲವರು ಕಾಗೆಗಳನ್ನು ಕಲ್ಲುಗಳಿಂದ ಹೊಡೆಯುತ್ತಾರೆ. ಹಾಗೆ ಮಾಡಿದರೆ ಶನಿ ದೇವರಿಗೆ ವಿಪರೀತ ಕೋಪಬರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ