Publish Date: Mon, 14 Oct 2024 (08:40 IST)
Updated Date: Mon, 14 Oct 2024 (08:49 IST)
ಬೆಂಗಳೂರು: ಶಿವನ ವಾಹನ ನಂದಿ. ನಂದಿಯನ್ನೂ ನಾವು ದೇವರ ರೂಪದಲ್ಲಿ ಪೂಜೆ ಮಾಡುತ್ತೇವೆ. ನಂದಿಯ ಜಪ ಮಾಡುವುದರಿಂದ ನಮಗೆ ಎಷ್ಟು ಉಪಯೋಗವಿದೆ ಎಂಬುದನ್ನು ನೋಡೋಣ.
ನಂದಿ ಕೇವಲ ಶಿವನ ವಾಹನ ಮಾತ್ರವಲ್ಲ, ಆತ ರಕ್ಷಣೆ ಅಥವಾ ರಕ್ಷಕನನ್ನು ಪ್ರತಿನಿಧಿಸುತ್ತಾನೆ. ಹಲವು ಜನ ನಂದಿಯ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಯಾಕೆಂದರೆ ನಂದಿ ಅತ್ಯಂತ ಪವರ್ ಫುಲ್ ಆಗಿದ್ದು, ಆತನ ಕುರಿತು ಜಪ ಮಾಡುವುದರಿಂದ ನಮ್ಮ ಶಕ್ತಿ ವೃದ್ಧಿಯಾಗುತ್ತದೆ.
ಓಂ ತತ್ಪುರುಷಾಯ ವಿದ್ಮಹೇ ನಂದಿಕೇಶ್ವರಾಯ ಧೀಮಹಿ
ತನ್ನೋ ವೃಷಭರೂಪ್ರಚೋದಯಾತ್
ಇದು ನಂದಿ ಗಾಯತ್ರಿ ಮಂತ್ರವಾಗಿದ್ದು ಇದನ್ನು ವಿಶೇಷವಾಗಿ ಸೋಮವಾರ ಜಪಿಸುವುದರಿಂದ ನಮಗೆ ಅನೇಕ ಲಾಭಗಳಿವೆ. ವಿಶೇಷವಾಗಿ ನಮ್ಮ ಬುದ್ಧಿ ಶಕ್ತಿ ಚುರುಕಾಗುತ್ತದೆ. ಅದೇ ರೀತಿ ಮಾನಸಿಕ ಮತ್ತು ದೈಹಿಕವಾಗಿ ಬಲಶಾಲಿಗಳಾಗುತ್ತೇವೆ. ಅಲ್ಲದೆ ದೈಹಿಕವಾಗಿ ಕಾಡುವ ನೋವು, ಬಾಧೆಗಳಿಂದ ಮುಕ್ತಿ ಸಿಗುತ್್ತದೆ.
ನಂದಿಯನ್ನು ಪೂಜೆ ಮಾಡುವುದರಿಂದ ಶಿವನ ಆಶೀರ್ವಾದವನ್ನೂ ಪಡೆಯಬಹುದಾಗಿದೆ. ನಂದಿಯು ಶಿವನಿಗೆ ಅತ್ಯಂತ ಪ್ರಿಯನಾದವನು. ಹೀಗಾಗಿ ನಂದಿಯನ್ನು ಗೌರವಿಸಿದರೆ ಶಿವನ ಪ್ರೀತಿಗೆ ಪಾತ್ರರಾಗುವಿರಿ. ಅಲ್ಲ,ದೆ ನಂದಿಯನ್ನು ಪೂಜೆ ಮಾಡುವುದರಿಂದ ನಿಮ್ಮ ಧಾರ್ಮಿಕ ಶ್ರದ್ಧೆ, ನಂಬಿಕೆಗಳನ್ನು ಮತ್ತಷ್ಟು ದೃಢವಾಗುತ್ತದೆ.