Select Your Language

Notifications

webdunia
webdunia
webdunia
webdunia

ಬಿಲ್ವ ಪತ್ರೆಯಿಂದ ಈ ರೀತಿ ಮಾಡಿದರೆ ವಾಸ್ತುದೋಷ ನಿವಾರಣೆಯಾಗುತ್ತದೆಯಂತೆ

ಬಿಲ್ವ ಪತ್ರೆಯಿಂದ ಈ ರೀತಿ ಮಾಡಿದರೆ ವಾಸ್ತುದೋಷ ನಿವಾರಣೆಯಾಗುತ್ತದೆಯಂತೆ
ಬೆಂಗಳೂರು , ಶುಕ್ರವಾರ, 22 ಜೂನ್ 2018 (13:18 IST)
ಬೆಂಗಳೂರು : ಬಿಲ್ವ ಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದದು. ಇದರಿಂದ ಶಿವನ ಪೂಜೆ ಮಾಡಿದರೆ ಪಾಪಗಳೆಲ್ಲಾ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ. ಅದೇರೀತಿ ಈ ಬಿಲ್ವ ಪತ್ರೆಯಿಂದ ವಾಸ್ತುದೋಷ ಕೂಡ ನಿವಾರಣೆಯಾಗುತ್ತದೆ.


ಬಿಲ್ವ ಮರವು ಮನೆಯ ಈಶಾನ್ಯ ಭಾಗದಲ್ಲಿದ್ದರೆ ತೊಂದರೆಗಳು ಪರಿಹಾರವಾಗುತ್ತದೆ ಮತ್ತು ಐಶ್ವರ್ಯ ಉಂಟಾಗುತ್ತದೆ. ಮನೆಯ ಪಶ್ಚಿಮ ಭಾಗದಲ್ಲಿದ್ದರೆ ಸಂತಾನ ಲಾಭವಾಗುತ್ತದೆ. ದಕ್ಷಿಣದಲ್ಲಿದ್ದರೆ ಯಮ ಭಾದೆ ಇರುವುದಿಲ್ಲ. ಬಿಲ್ವಪತ್ರೆಗಳಿಂದ ತೋರಣ ಕಟ್ಟಿದರೆ ಯಾವ ದುಷ್ಟಶಕ್ತಿಗಳೂ ಒಳಬರುವುದಿಲ್ಲ. ಶಿವನಿಗೆ ಪೂಜೆ ಮಾಡಿದ ಬಿಲ್ವಪತ್ರೆಯನ್ನು ಪ್ರತಿದಿನ ನೀರಿಗೆ ಹಾಕಿ ಮೂರು ಗಂಟೆಗಳ ನಂತರ ಆ ನೀರನ್ನು ಸೇವಿಸಿದರೆ ಆರೋಗ್ಯವೂ ಉತ್ತಮ ಇರುತ್ತದೆ. ಬಿಲ್ವಪತ್ರೆಯ ಕಾಯಿಯನ್ನು ದೇವರ ಕೋಣೆ ಮತ್ತು ಹಾಲ್‌ನಲ್ಲಿ ಈಶಾನ್ಯ ಮೂಲೆಯ್ಲಿ ಕಟ್ಟಿದರೆ ವಾಸ್ತುದೋಷ ಇದ್ದರೆ ನಿವಾರಣೆ ಆಗುವುದು. ಪ್ರತಿದಿನ ಬೆಳಗ್ಗೆ ಎದ್ದು ನಂತರ ಬಿಲ್ವಪತ್ರೆಯ ಮರವನ್ನು ನೋಡಿದರೆ ಆ ದಿನಪೂರ್ತಿ ಸಂತೋಷದಿಂದ ಇರಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯ ಮುಖ್ಯ ದ್ವಾರವನ್ನು ನಿರ್ಮಿಸುವಾಗ ಈ ವಾಸ್ತು ನಿಯಮ ನೆನಪಿನಲ್ಲಿರಲಿ