ವಾಹನಕ್ಕೆ ಆಯುಧ ಪೂಜೆ ಮಾಡುವಾಗ ಯಾವ ಮಂತ್ರ ಹೇಳಬೇಕು

Krishnaveni K
ಮಂಗಳವಾರ, 30 ಸೆಪ್ಟಂಬರ್ 2025 (08:40 IST)
Photo Credit: AI Image
ಇನ್ನೇನು ದಸರಾ ಆಯುಧ ಪೂಜೆ ಸಂಭ್ರಮ. ಮನೆಯಲ್ಲಿರುವ ವಾಹನಗಳಿಗೆ ಪೂಜೆ ಮಾಡುವುದು ಪದ್ಧತಿ. ವಾಹನಗಳಿಗೆ ಪೂಜೆ ಮಾಡುವಾಗ ಯಾವ ಮಂತ್ರ ಹೇಳಬೇಕು ಇಲ್ಲಿದೆ ವಿಧಾನ.

ಪ್ರತಿನಿತ್ಯ ನಾವು ಓಡಾಡುವ ವಾಹನಗಳಿಗೆ ದೃಷ್ಟಿ ತೆಗೆದು, ಯಾವುದೇ ಅಡೆತಡೆಗಳು, ತೊಂದರೆಗಳು ಬಾರದಂತೆ ಪೂಜೆ ಮಾಡುವುದು ವಾಡಿಕೆ. ಅಪಘಾತ ಭಯ, ವಾಹನಗಳಿಂದಾಗಿ ಬರುವ ಸಮಸ್ಯೆಗಳು ಇದರಿಂದ ನಿವಾರಣೆಯಾಗುತ್ತದೆ ಎಂದು ನಂಬಿಕೆ.

ಇದಕ್ಕಾಗಿ ಮೊದಲು ವಾಹನಗಳನ್ನು ತೊಳೆದು ಶುಭ್ರ ಮಾಡಿಕೊಳ್ಳಬೇಕು. ಬಳಿಕ ಗಂಧ, ಅರಿಶಿನ ಕುಂಕುಮವನ್ನು ಹಚ್ಚಬೇಕು. ಗಾಡಿಯ ನಾಲ್ಕೂ ಚಕ್ರಗಳಿಗೆ ನಿಂಬೆ ಹಣ್ಣುಗಳನ್ನಿಡಬೇಕು. ವಾಹನಕ್ಕೆ ಎದುರು ಭಾಗದಲ್ಲಿ ಹೂವಿನ ಮಾಲೆ ಹಾಕಿ ಓಂ ಸ್ವಸ್ತಿ ಎಂದು ಗಂಧ ಅಥವಾ ಅರಿಶಿನ ಕುಂಕುಮದಲ್ಲಿ ಬರೆಯಬೇಕು.

ಬಳಿಕ ಒಂದು ತೆಂಗಿನ ಕಾಯಿ ಹಿಡಿದುಕೊಂಡು ವಾಹನಕ್ಕೆ ಒಂದು ಸುತ್ತು ಬಂದು ಎದುರು ಭಾಗದಿಂದ ತೆಂಗಿನ ಕಾಯಿ ಒಡೆಯಬೇಕು. ಒಡೆಯುವಾಗ ಸ್ವಲ್ಪ ನೀರು ಉಳಿಸಿಕೊಂಡು ಈ ನೀರನ್ನು ವಾಹನದ ನಾಲ್ಕೂ ಚಕ್ರದ ಬಳಿ ಚಿಮುಕಿಸಬೇಕು. ಈಗ ಅಗರಬತ್ತಿಯಿಂದ ಆರತಿ ಮಾಡಬೇಕು.

ಈ ರೀತಿ ಪೂಜೆ ಮಾಡುವಾಗ ತಪ್ಪದೇ ಈ ಕೆಳಗಿನ ಮಂತ್ರವನ್ನು ಪಠಿಸಿ:
ವಿವಾದೇ ವಿಷಾದೇ ಪ್ರಮಾದೇ ಪ್ರವಾಸೇ
ಜಲೇ ಚಾನಲೇ ಶತ್ರು ಮಾಧಯೇ,
ಅರಣ್ಯೇ ಶರಣ್ಯೇ ಸದಾ ಮಾಂ ಪಾಹಿ
ಗತಿಸ್ತವೂಂ ಗತಿಸ್ತವೂಂ ತ್ವಮೇಕಾ ಭವಾನಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ದ್ವಾದಶ ರಾಶಿಯವರಿಗೆ ಹಣಕಾಸಿನ ತೊಂದರೆ ಬರುತ್ತಾ, ಇಲ್ಲಿದೆ ವಿವರ

ಶುಕ್ರವಾರ ಓದಬೇಕಾದ ಲಕ್ಷ್ಮೀ ಮಂತ್ರ

ದ್ವಾದಶ ರಾಶಿಯವರಿಗೆ 2026 ರಲ್ಲಿ ಪ್ರೇಮ ಸಂಬಂಧದ ಭವಿಷ್ಯ ಹೇಗಿರಲಿದೆ

ಭಯವಾಗುತ್ತಿದ್ದರೆ ಪ್ರಭು ರಾಮಚಂದ್ರನ ಈ ಸ್ತೋತ್ರವನ್ನು ಓದಿ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಮುಂದಿನ ಸುದ್ದಿ
Show comments