Publish Date: Tue, 02 Apr 2019 (06:10 IST)
Updated Date: Tue, 02 Apr 2019 (06:14 IST)
ಬೆಂಗಳೂರು : ಯಾವುದೇ ಕಾರ್ಯಕ್ಕೆ ಹೋಗುವ ಮೊದಲು ಆ ಕಾರ್ಯ ನೇರವೆರಲಿ ಎಂದು ದೇವರನ್ನು ಪ್ರಾರ್ಥಿಸುತ್ತೇವೆ. ಆದರೆ ಕೆಲವೊಮ್ಮೆ ಆ ಕಾರ್ಯ ನೇರವೆರಲು ಸಾಧ್ಯವಿದ್ದರೂ ಅದು ಸಡನ್ ಆಗಿ ಹಾಳಾಗಿ ಬಿಡುತ್ತದೆ. ಇದಕ್ಕೆ ಕಾರಣವೆನೆಂಬುದು ಇಲ್ಲಿದೆ ನೋಡಿ.
ನಾವು ಯಾವುದೇ ಕಾರ್ಯಕ್ಕೂ ಹೋದರೂ ವಿಘ್ನ ಎದುರಾಗುತ್ತಿರುತ್ತದೆ. ಅಲ್ಲಿ ಕಲಹ, ಅಶಾಂತಿ ಮನೆಮಾಡಿರುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಹೋಗುವ ದಿಕ್ಕು. ಹೌದು. ನಾವು ಯಾವ ಕಡೆ ಹೋಗಬೇಕು, ಯಾವ ರೀತಿ ಹೋಗಬೇಕು, ಏನನ್ನು ಧರಿಸಿ ಹೋಗಬೇಕು, ಯಾವ ಸಂಸ್ಕಾರ ಮಾಡಿ ಹೋಗಬೇಕು ಎಂಬುದನ್ನು ನಮ್ಮ ಧರ್ಮಶಾಸ್ತ್ರ ವೇದಗಳ ಮೂಲಕ ತಿಳಿಸಿಕೊಟ್ಟಿದೆ.
ಆದ್ದರಿಂದ ನಾವು ಯಾವುದೇ ಕೆಲಸಕ್ಕೆ ಹೋಗುವಾಗ ದಕ್ಷಿಣ ದಿಕ್ಕಿನ ಕಡೆಗೆ ಮುಖಮಾಡಿಕೊಂಡು ಹೋದರೆ ನಮ್ಮ ಕಾರ್ಯ ಸಿದ್ಧಿಸುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ. ಇದರಿಂದ ಧನನಷ್ಟ ಆಗುವುದರ ಜೊತೆಗೆ ಜೀವಕ್ಕೆ ಆಪತ್ತು ಬರುವ ಸಂಭವವು ಹೆಚ್ಚೆನ್ನುತ್ತಾರೆ ಪಂಡಿತರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.