Webdunia - Bharat's app for daily news and videos

Install App

Durga Devi Mantra: ಉತ್ತಮ ಆರೋಗ್ಯಕ್ಕಾಗಿ ಈ ದುರ್ಗಾ ಮಂತ್ರ ಪಠಿಸಿ

Krishnaveni K
ಮಂಗಳವಾರ, 3 ಡಿಸೆಂಬರ್ 2024 (08:40 IST)
ಬೆಂಗಳೂರು: ಇಂದು ಮಂಗಳವಾರವಾಗಿದ್ದು ದುರ್ಗಾದೇವಿಗೆ ವಿಶೇಷವಾದ ದಿನವಾಗಿದೆ. ಈ ದಿನ ದುರ್ಗಾ ದೇವಿಯ ಈ ಮಂತ್ರವನ್ನು ಪಠಿಸಿದರೆ ನಿಮಗೆ ಆರೋಗ್ಯ, ಆಯುಷ್ಯ ವೃದ್ಧಿಯಾಗುತ್ತದೆ. ಯಾವ ಮಂತ್ರ ಇಲ್ಲಿ ನೋಡಿ.

ದುರ್ಗಾ ದೇವಿಯು ದುಷ್ಟ ಶಕ್ತಿಯನ್ನು ಹೋಗಲಾಡಿಸಿ ನಮ್ಮ ಜೀವನದಲ್ಲಿ ಸುಖ ಸಮೃದ್ಧಿಯನ್ನು ತರುವ ಮಾತೆಯಾಗಿದ್ದಾಳೆ. ಆಕೆಯ ಕರುಣಾ ದೃಷ್ಟಿಯಿದ್ದರೆ ಜೀವನದಲ್ಲಿ ಆರೋಗ್ಯ, ಆಯುಷ್ಯ, ಯಶಸ್ಸು, ಕೀರ್ತಿ ಎಲ್ಲವೂ ತಾನಾಗಿಯೇ ಬರುತ್ತದೆ. ಅದಕ್ಕಾಗಿ ದುರ್ಗಾ ದೇವಿಯ ಈ ಮಂತ್ರವನ್ನು ಪಠಿಸುವುದು ಮುಖ್ಯವಾಗಿದೆ.

ದೇಹಿ ಸೌಭಾಗ್ಯಂ ಆರೋಗ್ಯಂ ದೇಹಿ ಮೇ ಪರಮಂ ಸುಖಮ್
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋಜಹಿ

ಈ ಮಂತ್ರವನ್ನು ಪ್ರತಿನಿತ್ಯ ಪಠಿಸುತ್ತಿದ್ದರೆ ಆರೋಗ್ಯ, ಸೌಭಾಗ್ಯ, ನೆಮ್ಮದಿ, ಯಶಸ್ಸು ನಿಮ್ಮದಾಗುತ್ತದೆ. ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕವಾಗಿ ಚಿಂತೆ, ಖಿನ್ನತೆ ಇತ್ಯಾದಿ ಸಮಸ್ಯೆಗಳಿದ್ದರೂ ಈ ಮಂತ್ರವನ್ನು ತಪ್ಪದೇ ಪ್ರತಿನಿತ್ಯ ಪಠಿಸುವುದು ಉತ್ತಮ. ಇದರಿಂದ ದುರ್ಗಾ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಈ ಮಂತ್ರವನ್ನು ದುರ್ಗಾ ಸಪ್ತಶತಿಯಿಂದ ಪಡೆಯಲಾಗಿದ್ದು, ದುರ್ಗಾ ದೇವಿಯ ಪವರ್ ಫುಲ್ ಮಂತ್ರವಾಗಿದೆ.

ಇದಲ್ಲದೆ, ಆರೋಗ್ಯಕ್ಕಾಗಿ ದುರ್ಗಾ ದೇವಿಯನ್ನು ಕುರಿತು ಈ ಮಂತ್ರವನ್ನೂ ಪಠಿಸಬಹುದು. ಅದು ಹೀಗಿದೆ:

ಓಂ ದುರ್ಗಾ ದೇವಿಯೇ ನಮಃ
ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸುತ್ತಿದ್ದರೆ ದುರ್ಗಾ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ದುರ್ಗಾ ದೇವಿ ಇಡೀ ಲೋಕಕ್ಕೇ ತಾಯಿ. ಆಕೆಯ ಅನುಗ್ರಹವಿದ್ದರೆ ದೇವಾನುದೇವತೆಗಳಿಗೂ ಜಯ ಶತಃಸಿದ್ಧವಂತೆ. ಇಂತಹ ದುರ್ಗಾದೇವಿಯನ್ನು ಆರಾಧಿಸಿದರೆ ಜೀವನದಲ್ಲಿ ಉನ್ನತಿ ಖಂಡಿತಾ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಗಣೇಶ ಪ್ರಾತಃಸ್ಮರಣಂ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಈಶಾನ ಸ್ತುತಿ ಸ್ತೋತ್ರ ಮತ್ತು ಪಠಿಸುವುದರ ಫಲವೇನು ತಿಳಿಯಿರಿ

ಶ್ರೀ ಕಾರ್ಯಸಿದ್ಧಿ ಹನುಮಾನ್ ಮಂತ್ರ ಓದುವ ಫಲ, ಬೆಸ್ಟ್ ಸಮಯ ಯಾವುದು ಇಲ್ಲಿದೆ ವಿವರ

ಶ್ರೀಕೃಷ್ಣ ಬೆಣ್ಣೆ ಕದಿಯುತ್ತಿದ್ದದ್ದೇಕೆ, ಬಾಲಲೀಲೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು

ಮುಂದಿನ ಸುದ್ದಿ
Show comments