ಬೆಂಗಳೂರು: ಶನಿವಾರ ಶನಿದೇವನ ದಿನವಾಗಿದ್ದು, ಈ ದಿನ ಶನಿಯ ಆರಾಧನೆಯನ್ನು ಮಾಡುವುದಿರಂದ ಜೀವನದ ಶನಿದೋಷ ದೂರವಾಗುತ್ತದೆ ಎಂಬ ನಂಬಿಕೆಯಿದೆ. ಇನ್ನೂ ಈ ದಿನದಂದು ಕೆಲ ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ವಾರಾಂತ್ಯದ ವಿಶ್ರಾಂತಿ ದಿನವಾಗಿದ್ದು, ಕಬ್ಬಿಣ, ಎಣ್ಣೆ ಮುಂತಾದ ವಸ್ತುಗಳನ್ನು ಖರೀದಿಸಬಾರದು ಮತ್ತು ಅಮಲು ಪದಾರ್ಥಗಳಿಂದ ದೂರವಿರಬೇಕೆಂದು ಹೇಳಲಾಗಿದೆ.
ಇನ್ನೂ ಈ ದಿನದಂದು ಹಾಲು ಹಾಗೂ ಮೊಸರು ಸೇವನೆಯಿಂದ ದೂರವಿರಬೇಕೆಂದು ಹೇಳಲಾಗುತ್ತದೆ.
ಇನ್ನೂ ಈ ದಿನದಂದು ಹನುಮಾನ್ ಮತ್ತು ಶಿವನಿಗೆ ಪ್ರಿಯವಾದ ಭಸ್ಮ, ವಿಭೂತಿ, ಚಂದನ ಹಚ್ಚುವುದು, ಸುಂದರಕಾಂಡ ಮತ್ತು ಹನುಮಾನ್ ಚಾಲೀಸಾ ಪಠಿಸುವುದರಿಂದ ಜೀವನದಲ್ಲಿ ಮಂಗಳಕರವಾಗುತ್ತದೆಯೆಂಬ ನಂಬಿಕೆಯಿದೆ.
ವಿಶೇಷವಾಗಿ ಈ ದಿನದಂದು ಶುಭ್ರವಾಗಿ ಹನುಮಾನ್ ದೇವರ ಹಾಗೂ ಶನಿದೇವರ ದೇವಸ್ಥಾನಕ್ಕೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸುವುದರಿಂದ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ದೂರವಾಗುತ್ತದೆ.