Publish Date: Sun, 28 Feb 2021 (06:37 IST)
Updated Date: Sun, 28 Feb 2021 (06:38 IST)
ಬೆಂಗಳೂರು : ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸಿದರೆ ಮನೆಯಲ್ಲಿ ಸುಖ, ಶಾಂತಿ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಆದರೆ ಅದು ಮಾತ್ರವಲ್ಲ ಮನೆಯಲ್ಲಿಡುವ ವಸ್ತುಗಳು ಕೂಡ ಸರಿಯಾಗಿರಬೇಕು. ಇಲ್ಲವಾದರೆ ಅದರಿಂದ ಕೂಡ ಸಮಸ್ಯೆಗಳು ಕಾಡುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ ಮುರಿದ ಪಾತ್ರೆಗಳು ಮತ್ತು ಬಿರುಕು ಬಿಟ್ಟು ಪಾತ್ರೆಗಳನ್ನು ಮನೆಯಲ್ಲಿ ಬಳಸಬಾರದು. ಅಂತಹ ಪಾತ್ರೆಗಳಲ್ಲಿ ಆಹಾರ ಸೇವಿಸುವುದರಿಂದ ಮನೆಯಲ್ಲಿ ಬಡತನ ಕಾಡುತ್ತದೆ. ಇದು ಸಾಲದ ಸಮಸ್ಯೆಯಲ್ಲಿ ಸಿಲುಕಿಸುತ್ತದೆ.
ಹಾಗೇ ಸಾಲ ಮತ್ತು ಇತರ ರೀತಿಯ ತೊಂದರೆಗಳನ್ನು ತಪ್ಪಿಸಲು ಅಷ್ಟಭುಜಾಕೃತಿಯ ಕನ್ನಡಿಯನ್ನು ಮನೆಯ ಉತ್ತರ ಭಾಗದಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಶುಭ ಫಲಿತಾಂಶಗಳು ದೊರೆಯುತ್ತವೆ.