Select Your Language

Notifications

webdunia
webdunia
webdunia
webdunia

ಕೊನೆವರೆಗೂ ಪ್ರಯತ್ನಿಸಿ ಎಂದ ಅಮಿತ್ ಶಾ, ಗರಂ ಆದ ಯಡಿಯೂರಪ್ಪ!

ಕೊನೆವರೆಗೂ ಪ್ರಯತ್ನಿಸಿ ಎಂದ ಅಮಿತ್ ಶಾ, ಗರಂ ಆದ ಯಡಿಯೂರಪ್ಪ!
ಬೆಂಗಳೂರು , ಶನಿವಾರ, 19 ಮೇ 2018 (14:11 IST)
ಬೆಂಗಳೂರು: ವಿಶ್ವಾಸ ಮತದ ತೂಗುಗತ್ತಿ ನೆತ್ತಿ ಮೇಲೆ ತೂಗಾಡುತ್ತಿದ್ದರೆ ಮೊನ್ನೆಯಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ ಒತ್ತಡದಲ್ಲಿದ್ದಾರೆ.

ಬೇಕಾದಷ್ಟು ಸ್ಥಾನ ಸಿಗಲು ಪರದಾಡುತ್ತಿರುವ ಬಿಜೆಪಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆಯ ಮಾತುಗಳನ್ನಾಡಿದ್ದಾರೆ. ಕೊನೆಯವರೆಗೆ ಪ್ರಯತ್ನಿಸಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ ಬೇಕಾದಷ್ಟು ಸ್ಥಾನ ಸಿಗದ ಹತಾಶೆಯಲ್ಲಿರುವ ಬಿಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ. ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಗೆ ಸ್ವತಃ ಬಿಎಸ್ ವೈ ಕರೆ ಮಾಡಿ ಆಮಿಷ ಒಡ್ಡುವ ಅಡಿಯೋ ಬಿಡುಗಡೆಯಾಗಿದೆ. ಜತೆಗೆ ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಗೆ ಬಿಎಸ್ ವೈ ಪುತ್ರನೇ ಆಮಿಷ ಒಡ್ಡಲು ಕರೆ ಮಾಡಿರುವ ಅಡಿಯೋ ಕೂಡಾ ಬಿಡುಗಡೆಯಾಗಿದೆ. ಹೀಗಾಗಿ ಭಾರೀ ಅಮಿಷವೊಡ್ಡಿ ವಿಪಕ್ಷದ ಶಾಸಕರಿಗೆ ಬಿಜೆಪಿ ಗಾಳ ಹಾಕುತ್ತಿರುವುದು ಸ್ಪಷ್ಟವಾಗಿದೆ. ಹಾಗಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಬಿಗು ಬಂದೋಬಸ್ತ್ ನಿಂದಾಗಿ ಬಿಜೆಪಿಗೆ ಅಗತ್ಯ ಶಾಸಕರ ಬೆಂಬಲ ಸಿಗದೇ ಬಿಎಸ್ ವೈ ಹತಾಶೆಗೊಳಗಾಗಿದ್ದಾರೆ ಎನ್ನಲಾಗಿದೆ. ಅಂತೂ ಈ ಸರ್ಕಾರ ಉಳಿಯುತ್ತಾ ಅಳಿಯುತ್ತಾ ಎಂಬ ಪ್ರಶ್ನೆಗೆ ಎರಡೇ ಗಂಟೆಗಳೊಳಗೆ ಉತ್ತರ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತಿಮ ಭಾಷಣಕ್ಕೆ ಸಿದ್ಧರಾದರೇ ಸಿಎಂ ಬಿಎಸ್ ವೈ?!!