Select Your Language

Notifications

webdunia
webdunia
webdunia
webdunia

ಎಣ್ಣೆಗೆ ನ್ಯೂ ರೂಲ್ಸ್! ಏನು?

ಎಣ್ಣೆಗೆ ನ್ಯೂ ರೂಲ್ಸ್! ಏನು?
ಬೆಂಗಳೂರು , ಗುರುವಾರ, 7 ಏಪ್ರಿಲ್ 2022 (13:14 IST)
ರಾಯಚೂರು : ಅಬಕಾರಿ ಇಲಾಖೆಯ ಹೊಸ ಕ್ರಮದಿಂದ ಮದ್ಯ ಪೂರೈಕೆಗೆ ತಾಂತ್ರಿಕ ತೊಂದರೆಯುಂಟಾಗಿರುವ ಹಿನ್ನೆಲೆ ರಾಯಚೂರಿನಲ್ಲಿ ಮದ್ಯಮಾರಾಟಗಾರು ಪ್ರತಿಭಟನೆ ನಡೆಸಿದ್ದಾರೆ.

ನಗರದ ಕೆ.ಎಸ್.ಬಿ.ಸಿ.ಎಲ್ ಡಿಪೋ ಮುಂದೆ ಮದ್ಯ ಪೂರೈಕೆಗಾಗಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದಿಂದ ಹೋರಾಟ ನಡೆಯಿತು.

ವೆಬ್ ಇಂಡೆಂಟಿಂಗ್ ಮೂಲಕ ಮದ್ಯ ಖರೀದಿಗೆ ಆದೇಶ ಹಿನ್ನೆಲೆ, ಹೊಸ ಪದ್ಧತಿಯಿಂದ ಮದ್ಯಮಾರಾಟಗಾರರಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ.

ಸಾಫ್ಟ್ವೇರ್ ಸಮಸ್ಯೆಯಿಂದಾಗಿ ಏಪ್ರಿಲ್ 1 ರಿಂದ ಮದ್ಯ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮದ್ಯಪ್ರಿಯರು ಅವರಿಗಿಷ್ಟದ ಬ್ರಾಂಡ್ ಮದ್ಯ ಸಿಗದೆ ಬಾರ್ ಮಾಲೀಕರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮದ್ಯಪ್ರಿಯರ ಆಕ್ರೋಶ ಹಿನ್ನೆಲೆ ಮದ್ಯ ಮಾರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಖಾತೆಗಳು ಹ್ಯಾಕ್!