Publish Date: Wed, 28 Mar 2018 (21:00 IST)
Updated Date: Wed, 28 Mar 2018 (21:02 IST)
ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಕ್ರಾಂತಿಕಿರಣ್ ಅವರಿಂದ ಹುಬ್ಬಳ್ಳಿಯಲ್ಲಿ ಕಾರ್ಯಕರ್ತರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.
ನಗರದ ಖಾಸಗಿ ಹೋಟೆಲ್ ನಲ್ಲಿ ಡಾ.ಕ್ರಾಂತಿ ಕಿರಣ್ ಮಗನ ಹುಟ್ಟು ಹಬ್ಬದ ನೆಪದಲ್ಲಿ ಬಿಜೆಪಿ ಮುಖಂಡರಿಗೆ, ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಹಾಕಿದ್ದಾರೆ. ಬಾಡೂಟ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಪೊರೇಟರಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಕೂಡಾ ಭಾಗವಿಸಿದ್ದರು.
ಇನ್ನು ಡಾ.ಕ್ರಾಂತಿಕಿರಣ್ ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದು, ಚುನಾವಣೆಗೂ ಮೊದಲೇ ಮತದಾರರನ್ನ ಸೆಳೆಯಲು ಹಾಗೂ ಬಿಜೆಪಿ ಮುಖಂಡರಿಂದ ಟಿಕೇಟ್ ಕನ್ಪಮ್೯ ಮಾಡಿಕೊಳ್ಳಲು ಈ ಬಾಡೂಟ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಆದ್ರೆ ಕ್ರಾಂತಿ ಕಿರಣ್ ಮಾತ್ರ ಇದನ್ನ ಅಲ್ಲಗಳೆದಿದ್ದು, ಮಗನ ಬತ್೯ ಡೇ ಸಂಬಂಧ ಆಯ್ದ ಸಂಬಧಿಕರು ಹಾಗೂ ಸ್ನೇಹಿತರಿಗೆ ಅಹ್ವಾನ ನೀಡಿದ್ದರು ಎನ್ನಲಾಗಿದೆ.