Publish Date: Mon, 15 Oct 2018 (07:12 IST)
Updated Date: Mon, 15 Oct 2018 (07:13 IST)
ಉಡುಪಿ : ಮೊಬೈಲ್ ನಲ್ಲಿದ್ದ ಗೇಮ್ ಆಡುವ ಹುಚ್ಚಿಗೆ ಯುವಕನೊಬ್ಬ ತನ್ನ ಜೀವವನ್ನೇ ಕಳೆಳದುಕೊಂಡ ಘಟನೆ ಉಡುಪಿಯ ಬಸ್ರೂರಿನಲ್ಲಿ ನಡೆದಿದೆ.
ಭಾಸ್ಕರ ಪೂಜಾರಿ (21) ಎಂಬಾತ ಸಾವಪ್ಪಿದ ಯುವಕ. ಈತನಿಗೆ ಮೊಬೈಲ್ ನಲ್ಲಿ ಗೇಮ್ ಆಡುವುದೆಂದರೆ ತುಂಬಾ ಇಷ್ಟವಂತೆ. ಆದಕಾರಣ ಆತ ಬಾವಿಕಟ್ಟೆಯ ಮೇಲೆ ಕುಳಿತು ಗೇಮ್ ಆಡುತ್ತಿದ್ದಾಗ ಆಯ ತಪ್ಪಿ ಬಾವಿಗೆ ಬಿದ್ದಿದ್ದಾನೆ. ಯಾರು ನೋಡದ ಕಾರಣ ಆತ ಅಲ್ಲೇ ಸಾವನಪ್ಪಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ ಪೂಜಾರಿಯ ಸಹೋದರ ರಾಘವೇಂದ್ರ ಪೂಜಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.