Webdunia - Bharat's app for daily news and videos

Install App

ಶಿವಮೊಗ್ಗ ಕುರುಕ್ಷೇತ್ರ: ಬಿಎಸ್‌ವೈಗೆ ಆರೆಸ್ಸೆಸ್ ಅಭ್ಯರ್ಥಿ ಟಾಂಗ್

Webdunia
ಮಂಗಳವಾರ, 24 ಏಪ್ರಿಲ್ 2018 (12:38 IST)
ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರ್ ಎಸ್ ಎಸ್ ಮುಖಂಡರೊಬ್ಬರು ನಾಮಪತ್ರ ಸಲ್ಲಿಸಿದ್ದು ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.

ನಾನು ಸ್ಪರ್ಧಿಸುವುದಾದರೆ ಕಾಗೋಡು ತಿಮ್ಮಪ್ಪನವರೆ ನನ್ನ ಎದುರಾಳಿಯಾಗಿರಬೇಕು ಎಂದು  ಹೇಳಿದ್ದ ಬೇಳೂರು ಗೋಪಾಲಕೃಷ್ಣ ಅವರೆ ಈಗ ಕಾಗೋಡು ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಇನ್ನು ಕೆ.ಎಸ್.ಈಶ್ವರಪ್ಪನವರ ಸೋಲು ಖಚಿತ ಎಂದು ಹೇಳಿರುವ ಪ್ರಸನ್ನ ಕುಮಾರ್ ಕೂಡ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ಇದೆಲ್ಲದರ ನಡುವೆ ಬಗಲ್ ಮೆ ದುಶ್ಮನ್ ಎನ್ನುವಂತೆ 
 
ಮೊನ್ನೆ ಮೊನ್ನೆವರೆಗೂ ವೈರಿಗಳಾಗಿ ಕಾದಾಡಿಕೊಂಡಿದ್ದ ಮಾವ ಅಳಿಯ. ಒಟ್ಟಿಗೆ ಬಂದು ಮಾವನ ಸ್ಪರ್ಧೆಗೆ ಅಳಿಯ ಸಾಥ್ ಕೊಟ್ಟಿದ್ದಾರೆ. ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಾಥ್ ನೀಡಿದ್ದು ಮಾಜಿ ಶಾಸಕ ಕಾಗೋಡು ಅಳಿಯ ಬೇಳೂರು ಗೋಪಾಲಕೃಷ್ಣ. ಈ ಹಿಂದಿನ ಚುನಾವಣೆಯಲ್ಲಿ ಈ ಮಾವ ಅಳಿಯ ಮೂರು ಬಾರಿ ಚುನಾವಣೆ ಎದುರಿಸಿದ್ದು ಎರಡು ಬಾರಿ ಅಳಿಯ ಒಂದು ಬಾರಿ ಮಾತ್ರ ಮಾವ ನಗುವಿನ ನಗೆ ಬೀರಿದ್ದರು. ಬದಲಾದ ಸನ್ನಿವೇಷದಲ್ಲಿ  ಬಿಜೆಪಿಗೆ ಸಡ್ಡು ಹೊಡೆದ ಬೇಳೂರು ಮಾವ ಕಾಗೋಡಿಗೆ ಸಾಥ್ ನೀಡಿ ಬಿಜೆಪಿ ಸೋಲಿಸೋದೆ ನನ್ನ ಗುರಿ ಎಂದಿದ್ದಾರೆ. ಕಾಗೋಡು ಕೂಡ ಬೇಳೂರು ಕಾಂಗ್ರೆಸ್ ಗೆ ಬಂದಿದ್ದು ನಮ್ಮ ಬಲ ಹೆಚ್ಚಿದೆ. ಅವರಿಗೆ ಮುಂದಿನ ದಿನದಲ್ಲಿ ಸೂಕ್ತ ಸ್ಥಾನಮಾನ ದೊರಕಲಿದೆ ಎಂದಿದ್ದಾರೆ.
 
ರಾಜ್ಯ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್ ಎಸ್ಎಸ್ ಸಡ್ಡು ಹೊಡೆದ ಘಟನೆಯೂ ನಡೆದಿದೆ. ಸ್ವಯಂ ಸೇವಕ ಹನುಮೇಗೌಡ ಗಣವೇಷಧಾರಿಯಾಗಿಯೇ ಬಂದು ನಾಮಪತ್ರ ಸಲ್ಲಿಸುವ ಮೂಲಕ ಗಮನಸೆಳೆದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಅಸ್ಥಿ ಉತ್ಖನನ: ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಬಿಗ್‌ಟ್ವಿಸ್ಟ್‌

ಮೈಸೂರಿನತ್ತ ಹೆಜ್ಜೆ ಹಾಕಿದ ಅಭಿಮನ್ಯ ನೇತೃತ್ವದ 9 ಗಜಪಡೆ

ರಾಜಮನೆತನದ ತ್ಯಾಗದ ಫಲವೇ ಕೆಆರ್‌ಎಸ್ ಡ್ಯಾಂ: ಮಹಾದೇವಪ್ಪ ಹೇಳಿಕೆಗೆ ಸುಬುಧೇಂದ್ರ ತೀರ್ಥ ಪ್ರತಿಕ್ರಿಯೆ

ಜಾರ್ಖಂಡ್‌ ಮಾಜಿ ಸಿಎಂ ಸಿಬು ಸೊರೇನ್ ನಿಧನ: ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಮಾಜಿ ಸಿಎಂ ಶಿಬು ಸೊರೆನ್ ನಿಧನ: ಮೂರು ದಿನಗಳ ಶೋಕಾಚರಣೆ ಘೋಷಿಸಿದ ಜಾರ್ಖಂಡ್‌ ಸರ್ಕಾರ

ಮುಂದಿನ ಸುದ್ದಿ
Show comments