Select Your Language

Notifications

webdunia
webdunia
webdunia
webdunia

ಟಿಕೆಟ್ ಸಿಗುವವರೆಗೂ ಬಿಎಸ್ ವೈ ಪುತ್ರನ ಅಜ್ಞಾತ ವಾಸ

ಟಿಕೆಟ್ ಸಿಗುವವರೆಗೂ ಬಿಎಸ್ ವೈ ಪುತ್ರನ ಅಜ್ಞಾತ ವಾಸ
ಮೈಸೂರು , ಮಂಗಳವಾರ, 24 ಏಪ್ರಿಲ್ 2018 (09:42 IST)
ಮೈಸೂರು: ವರುಣಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಇಂದು ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆಯಿದೆ.

ಈ ನಡುವೆ ಬಿವೈ ವಿಜಯೇಂದ್ರ ನಿನ್ನೆ ಮಧ್ಯಾಹ್ನ ನಂಜನಗೂಡಿನಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಟಿಕೆಟ್ ಗೊಂದಲ ಬಗೆ ಹರಿಯುವವರೆಗೂ ಅಜ್ಞಾತ ವಾಸ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಕಾರ್ಯಕರ್ತರ ಕೈಗೂ ಸಿಗದಿರಲು ಅವರು ನಿರ್ಧರಿಸಿದ್ದಾರೆ.

ಈ ನಡುವೆ ಬಿಎಸ್ ವೈ ಕುಟುಂಬ ವರ್ಗದವರು ಬಿವೈ ವಿಜಯೇಂದ್ರಗೆ ಟಿಕೆಟ್ ಸಿಗಲೆಂದು ದೇವರ ಮೊರೆ ಹೋಗಿದ್ದು, ಇಂದು ಬೆಳಿಗ್ಗೆಯೇ ಮೈಸೂರಿನ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಕಾಶ್ ರೈಗೆ ತಿರುಗೇಟು ಕೊಟ್ಟ ಗೋಲ್ಡನ್ ಸ್ಟಾರ್ ಪತ್ನಿ