Publish Date: Tue, 24 Apr 2018 (09:03 IST)
Updated Date: Tue, 24 Apr 2018 (09:07 IST)
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ವರುಣಾ ಟಿಕೆಟ್ ನೀಡುವ ಬಗ್ಗೆ ಉಂಟಾಗಿರುವ ಗೊಂದಲ ಪರಿಹಾರಕ್ಕೆ ಕೇಂದ್ರ ನಾಯಕರು ಇಂದು ಸಭೆ ಸೇರಲಿದ್ದಾರೆ.
ಮೈಸೂರಿನಲ್ಲಿರುವ ಬಿಎಸ್ ವೈ ಭೇಟಿಯಾಗಿರುವ ರಾಜ್ಯ ಉಸ್ತುವಾರಿಗಳಾದ ಮುರಳೀಧರ್ ರಾವ್, ಪ್ರಕಾಶ್ ಜಾವೇಡ್ಕರ್ ಸೇರಿದಂತೆ ಮೈಸೂರು-ಚಾಮರಾಜನಗರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ನಿಯೋಗ ಇಂದು ಸಭೆ ನಡೆಸಲಿದೆ.
ಬಿವೈ ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಇಂದು ಅಂತಿಮ ನಿರ್ಧಾರವಾಗಲಿದೆ. ಅತ್ತ ಬಿಎಸ್ ವೈ ಕುಟುಂಬ ದೇವರ ಮೊರೆ ಹೋಗಿದ್ದು, ಚಾಮುಂಡೇಶ್ವರಿ, ಗಣಪತಿ, ಆಂಜನೇಯಸ್ವಾಮಿಗೆ ಪೂಜೇ ಸಲಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.