Select Your Language

Notifications

webdunia
webdunia
webdunia
webdunia

ಮಾಲೀಕಯ್ಯ ಗುತ್ತೇದಾರ್ ರಿಗೆ ಸವಾಲು ಎಸೆದ ಸಚಿವ ಪ್ರಿಯಾಂಕ್ ಖರ್ಗೆ

ಮಾಲೀಕಯ್ಯ ಗುತ್ತೇದಾರ್ ರಿಗೆ ಸವಾಲು ಎಸೆದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ , ಬುಧವಾರ, 11 ಏಪ್ರಿಲ್ 2018 (11:27 IST)
ಕಲಬುರಗಿ : ತಮ್ಮನ್ನು ಒಬ್ಬ ಬಚ್ಚಾ ಎಂದು ಹೇಳಿದ್ದ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ನೀಡಿದ್ದಾರೆ.


ಕಲಬುರಗಿಯಲ್ಲಿ ಮಾತನಾಡಿದ ಅವರು,’ ಬಚ್ಚಾ ಯಾರು ಅನ್ನೋದನ್ನ ಮತದಾರರು ನಿರ್ಧರಿಸುತ್ತಾರೆ. ಅಪ್ಪ ಮಗನನ್ನು ಸೋಲಿಸುತ್ತೇನೆ ಎಂದು ಗುತ್ತೇದಾರ್ ಹೇಳುತ್ತಾರೆ. ಅಫಜಲಪುರ ಕ್ಷೇತ್ರಕ್ಕೆ ಹೋಗಿ ತಾನು ಪ್ರಚಾರ ಮಾಡಿ ಗೆದ್ದು ತೋರಿಸಲಿ’ ಎಂದು ಸವಾಲು ಹಾಕಿದ್ದಾರೆ.


ಹಾಗೆ ಕಲಬುರ್ಗಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಾನು ಚಿತ್ತಾಪುರ ಕ್ಷೇತ್ರ ಬಿಟ್ಟು ಎಲ್ಲೂ ಸ್ಪರ್ಧೆ ಮಾಡುವುದಿಲ್ಲ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಗಾಳಿ ಸುದ್ದಿ ಹಬ್ಬಿಸಿದೆ ಎಂದು ಹೇಳುವುದರ ಮೂಲಕ ತಮ್ಮ ಕ್ಷೇತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಜಿದ್ದಾಜಿದ್ದಿನ ವೇದಿಕೆಯಾಗುತ್ತಿದೆ ಚನ್ನಪಟ್ಟಣ ಕ್ಷೇತ್ರ