Select Your Language

Notifications

webdunia
webdunia
webdunia
webdunia

ಮಾಲೀಕಯ್ಯ ಗುತ್ತೇದಾರ್ ಕೋಣವಿದ್ದಂತೆ: ಅದನ್ನು ಕಡಿಯಲೇಬೇಕು: ಅರುಣಕುಮಾರ ಪಾಟೀಲ್

ಮಾಲೀಕಯ್ಯ ಗುತ್ತೇದಾರ್ ಕೋಣವಿದ್ದಂತೆ: ಅದನ್ನು ಕಡಿಯಲೇಬೇಕು: ಅರುಣಕುಮಾರ ಪಾಟೀಲ್
ಕಲಬುರಗಿ , ಮಂಗಳವಾರ, 3 ಏಪ್ರಿಲ್ 2018 (17:07 IST)
ಸರಣಿ ಕೊಲೆ ಮಾಡಿದ ರಾಕ್ಷಸ ಮಾಲೀಕಯ್ಯ ಗುತ್ತೇದಾರ ಜೈಲಿನಲ್ಲಿರಬೇಕಿತ್ತು. ಆದರೆ ವಿಧಾನಸೌಧದಲ್ಲಿದ್ದಾರೆ. ಗುತ್ತೇದಾರ್ ಕೋಣವಿದ್ದಂತೆ ಅದನ್ನು ಕಡಿಯಲೇಬೇಕು ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ವಿರುದ್ಧ ಮಾಜಿ ಶಾಸಕ ಎಂ.ವೈ.ಪಾಟೀಲರ ಪುತ್ರ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. 
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜನರ ಭಾವನೆಗೆ ಬೆಲೆಕೊಟ್ಟು ರಾಜಕೀಯದಲ್ಲಿ ತಮ್ಮ ಕುಟುಂಬ ತೊಡಗಿಕೊಂಡಿದೆ. ನಮ್ಮ ತಂದೆಯವರಿಗೆ ಎಂ.ಎಲ್.ಸಿ ಆಗುವಂತೆ ಆಸೆ ಹಚ್ಚುತ್ತಿದ್ದಾನೆ. ಅವನ ಎದೆ ಮೇಲಿನ ಶರ್ಟ ಹಿಡಿದು ಕಪಾಳಕ್ಕೆ ಎರಡು ಬಾರಿಸಿದರೂ ಸಮಾಧಾನ ಆಗೋದಿಲ್ಲ ಅಂತೆಲ್ಲ ಹರಿಹಾಯ್ದಿರುವ ವಿಡಿಯೋ ಈಗ ವೈರಲ್ ಆಗಿದೆ. 
 
ಈಳಿಗೇರ ಕೋಣ ಕಡಿಯಬೇಕು. ಮತ್ತೆ ಅದು ಮುಂದೆ ಹುಟ್ಟಬಾರದು. ಮೂವತ್ತು ಸಾವಿರ ಮತಗಳ ಅಂತರದಿಂದ ಎಂ.ವೈ.ಪಾಟೀಲರನ್ನು ಆರಿಸಿ ತರಬೇಕು ಅಂತ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂರಿಂದ ಲಕ್ಷ ಲಕ್ಷ ರೂ ನೀಡಿ ಗ್ರಾ.ಪಂ ಸದಸ್ಯರ ಖರೀದಿ: ಬಿಜೆಪಿ