Select Your Language

Notifications

webdunia
webdunia
webdunia
webdunia

ಜ್ಯೂನಿಯರ್ ಎನ್ ಟಿಆರ್ ಹರಿಕೃಷ್ಣ ಸಾವಿಗೆ ನಿಖರ ಕಾರಣವೇನೆಂದು ಪತ್ತೆ ಮಾಡಿದ ಪೊಲೀಸರು

ಜ್ಯೂನಿಯರ್ ಎನ್ ಟಿಆರ್ ಹರಿಕೃಷ್ಣ ಸಾವಿಗೆ ನಿಖರ ಕಾರಣವೇನೆಂದು ಪತ್ತೆ ಮಾಡಿದ ಪೊಲೀಸರು
ಹೈದರಾಬಾದ್ , ಗುರುವಾರ, 30 ಆಗಸ್ಟ್ 2018 (09:50 IST)
ಹೈದರಾಬಾದ್: ನಿನ್ನೆಯಷ್ಟೇ ತೆಲಂಗಾಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನಂದಮೂರಿ ಹರಿಕೃಷ್ಣ ಸಾವಿಗೆ ಕಾರಣವೇನೆಂದು ಪೊಲೀಸರು ಪತ್ತೆ ಮಾಡಿದ್ದಾರೆ.
 

ಕಾರು ಪಲ್ಟಿಯಾಗಿ ಕೆಳಕ್ಕೆ ಬಿದ್ದ ಹರಿಕೃಷ್ಣ ತಲೆಗೆ ತೀವ್ರ ಗಾಯವಾಗಿದ್ದರಿಂದ ಅವರು ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಸ್ವತಃ ಹರಿಕೃಷ್ಣ ಕಾರು ಚಲಾಯಿಸುತ್ತಿದ್ದರು. ಆದರೆ ಅವರು ಸೀಟ್ ಬೆಲ್ಟ್ ಧರಿಸದೇ ಇದ್ದಿದ್ದೇ ಅವಘಡಕ್ಕೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಒಂದು ವೇಳೆ ಅವರು ಸೀಟು ಬೆಲ್ಟ್ ಧರಿಸಿದ್ದರೆ ಬೀಳುವ ಸಂದರ್ಭ ಇರುತ್ತಿರಲಿಲ್ಲ. ಆಗ ಅವರು ಬದುಕುಳಿಯುತ್ತಿದ್ದರು. ಆದರೆ ಕಾರಿನಲ್ಲಿ ಅವರ ಜತೆಗಿದ್ದ ಇತರರ ಪ್ರಕಾರ ಅವರು ಸೀಟು ಬೆಲ್ಟ್ ಧರಿಸದೇ ಹೈ ಸ್ಪೀಡ್ ನಲ್ಲಿ ಕಾರು ಚಲಾಯಿಸುತ್ತಿದ್ದರು. ಇದುವೇ ಅವರ ಜೀವಕ್ಕೆ ಕಂಟಕವಾಯಿತು’ ಎಂದು ಪೊಲೀಸರು ಕಾರಣ ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ..! ಇಲಿ ಕಚ್ಚಿದ್ದಕ್ಕೂ ಇಷ್ಟು ದುಬಾರಿ ಮೊತ್ತದ ಪರಿಹಾರ!