Select Your Language

Notifications

webdunia
webdunia
webdunia
webdunia

ಮಹಾಮಳೆಗೆ ಚೆನ್ನೈ ಜನ ಜೀವನ ಅಸ್ತವ್ಯಸ್ತ!

ಮಹಾಮಳೆಗೆ ಚೆನ್ನೈ ಜನ ಜೀವನ ಅಸ್ತವ್ಯಸ್ತ!
ಚೆನ್ನೈ , ಶುಕ್ರವಾರ, 12 ನವೆಂಬರ್ 2021 (15:41 IST)
ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ ಚೆನ್ನೈ ಜನ ತತ್ತರಿಸಿ ಹೋಗಿದ್ದಾರೆ. ಮನೆಗಳಿಗೆ ಮಳೆ ನೀರು ನುಗ್ಗಿ ಜನರ ಜೀವನ ಬೀದಿಪಾಲಾಗಿದೆ.
ರಸ್ತೆಗಳು ನದಿಗಳಂತಾಗಿ ಸಂಚಾರ ವ್ಯವಸ್ಥೆ ಅಲ್ಲೋಲಕಲ್ಲೋಲಗೊಂಡಿದೆ. ತೀವ್ರ ಮಳೆಹಾನಿಗೊಳಗಾದ ಪ್ರದೇಶಗಳಲ್ಲಿನ ಜನ ಸಂಪರ್ಕ ಇರಲಿ ದೂರವಾಣಿ ಸಂಪರ್ಕವೂ ಸಾಧ್ಯವಾಗುತ್ತಿಲ್ಲ. ಇನ್ನು ಭಾರೀ ಮಳೆಗೆ ತುಂಬಿದ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿರುವುದರಿಂದ ತಮಿಳುನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.  ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗೃತ ಕ್ರಮವಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗ್ತಿದೆ. ಸದ್ಯ ಭೀಕರ ಮಳೆಗೆ ಈವರೆಗೆ 14 ಮಂದಿ ಪ್ರಾಣ ತೆತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ! ಎಲ್ಲೇಲ್ಲಿ ಎಷ್ಟೆಷ್ಟು ದರ ಇದೆ ಗೊತ್ತಾ?