Select Your Language

Notifications

webdunia
webdunia
webdunia
webdunia

ಶತ್ರುಗಳ ಗುಹೆಯೊಳಗೆ ಹೋಗಿ ಎದೆಯುಬ್ಬಿಸಿ ಬಂದಿದ್ದವ ತಾಯ್ನಾಡಿನಲ್ಲೇ ಹುತಾತ್ಮನಾದ!

ಶತ್ರುಗಳ ಗುಹೆಯೊಳಗೆ ಹೋಗಿ ಎದೆಯುಬ್ಬಿಸಿ ಬಂದಿದ್ದವ ತಾಯ್ನಾಡಿನಲ್ಲೇ ಹುತಾತ್ಮನಾದ!
ನವದೆಹಲಿ , ಬುಧವಾರ, 26 ಸೆಪ್ಟಂಬರ್ 2018 (09:24 IST)
ನವದೆಹಲಿ: 2016 ರಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಎಲ್ಲರಿಗೂ ಗೊತ್ತೇ ಇದೆ. ಆ ಸಂದರ್ಭದಲ್ಲಿ ಸೇನೆಯ ತಂಡದ ಭಾಗವಾಗಿದ್ದ ವೀರ ಯೋಧ ಸಂದೀಪ್ ಸಿಂಗ್ ಇದೀಗ ಹುತಾತ್ಮರಾಗಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಮಾಡಿ ಯಶಸ್ವಿಯಾಗಿ ಭಾರತಕ್ಕೆ ಮರಳಿದ ಟೀಂನ ಭಾಗವಾಗಿದ್ದ ಯೋಧ ಲ್ಯಾನ್ಸ್ ನಾಯಕ್ ಸಂದೀಪ್ ಸಿಂಗ್ (30) ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ.

ಕಾಶ್ಮೀರದಲ್ಲಿ ನಡೆದ ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಸೇನೆ ಐವರು ಉಗ್ರರನ್ನು ಹೊಡೆದುರಳಿಸಿತ್ತು. ಈ ಸಂದರ್ಭದಲ್ಲಿ ಸಂದೀಪ್ ಸಿಂಗ್ ಗೆ ಗುಂಡೇಟು ತಗುಲಿತ್ತು. ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಹೀರೋ ಸಂದೀಪ್ ಸಿಂಗ್ ಪಾರ್ಥಿವ ಶರೀರಕ್ಕೆ ಸೇನೆ ಮತ್ತು ರಕ್ಷಣಾ ಇಲಾಖೆ ಸಕಲ ಸರ್ಕಾರಿ ಗೌರವದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮ ಕ್ರಿಯೆಎ ತವರಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಐಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರು ಹುಷಾರ್!