Publish Date: Wed, 22 Aug 2018 (10:57 IST)
Updated Date: Wed, 22 Aug 2018 (11:06 IST)
ತಿರುವನಂತರಪುರಂ: ಸುತ್ತಲೂ ನೀರು.. ಎಲ್ಲಿ ಹೋಗುವುದು ಹೇಗೆ ಹೋಗುವುದು ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ನೆರವಾದ ನಮ್ಮ ಹೆಮ್ಮೆಯ ಸೇನಾ ಸಿಬ್ಬಂದಿಗೆ ಇದೀಗ ಪ್ರವಾಹ ಪೀಡಿತ ಜನ ಧನ್ಯವಾದ ಸಮರ್ಪಿಸುತ್ತಿದ್ದಾರೆ.
ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿ ಗರ್ಭಿಣಿಯರು, ವೃದ್ಧರು, ಮಕ್ಕಳು ಸೇರಿದಂತೆ ಸಂತ್ರಸ್ತರನ್ನು ಸಾಹಸ ಮಾಡಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ಯೋಧರಿಗೆ ಮರಳುವಾಗ ಅಲ್ಲಿನ ಸಂತ್ರಸ್ತರು ಸೆಲ್ಯೂಟ್ ಮಾಡಿ ತಮ್ಮ ಕೃತಜ್ಞತೆ ಸಲ್ಲಿಸುತ್ತಿರುವ ದೃಶ್ಯ ಇದೀಗ ಕೇರಳದಲ್ಲಿ ಸಾಮಾನ್ಯವಾಗಿದೆ.
ಕೆಲವೆಡೆ ಕಾರ್ಯಾಚರಣೆ ಮುಗಿಸಿ ತೆರಳುತ್ತಿರುವ ಯೋಧರಿಗೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿ ಸೆಲ್ಯೂಟ್ ಹೊಡೆದು ಜನಸಾಮಾನ್ಯರು ಬೀಳ್ಕೊಡುತ್ತಿದ್ದಾರೆ. ನಮ್ಮ ಸೈನಿಕರಲ್ಲವೇ ನಿಜವಾದ ಹೀರೋಗಳು?!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.