Publish Date: Tue, 21 Aug 2018 (11:19 IST)
Updated Date: Tue, 21 Aug 2018 (11:20 IST)
ತಿರುವನಂತಪುರಂ: ಸಾಮಾನ್ಯವಾಗಿ ಕೇರಳ ಪ್ರವಾಹ ಎನ್ನುವ ಶಬ್ಧವನ್ನು ಕೇಳಿಯೇ ಇರಲಿಕ್ಕಿಲ್ಲ. ಹಾಗಿದ್ದರೂ ಈ ಬಾರಿ ಇಷ್ಟೊಂದು ನೆರೆ ಬಂದಿದ್ದು ಹೇಗೆ? ಇದಕ್ಕೆ ತಜ್ಞರು ಕಾರಣ ವಿಶ್ಲೇಷಿಸಿದ್ದಾರೆ.
ಕೇರಳದ ಸುಮಾರು 35 ಕ್ಕೂ ಹೆಚ್ಚು ಡ್ಯಾಂಗಳು ಈ ವರ್ಷ ಉತ್ತಮ ಮಳೆಯಿಂದಾಗಿ ಶೇ. 85 ಕ್ಕಿಂತ ಹೆಚ್ಚು ಭರ್ತಿಯಾಗಿದ್ದವು. ಸಾಮಾನ್ಯವಾಗಿ ಜುಲೈ ತಿಂಗಳೊಳಗಾಗಿ ಡ್ಯಾಂಗಳು ಭರ್ತಿಯಾಗಿದ್ದರೆ ಜುಲೈ ಅಂತ್ಯಕ್ಕೆ ಮೊದಲೇ ನೀರು ಹೊರಬಿಡಬೇಕು.
ಆದರೆ ಕೇರಳದಲ್ಲಿ ಈ ಬಾರಿ ಡ್ಯಾಂಗಳು ಭರ್ತಿಯಾಗಿದ್ದರೂ ನೀರು ಹೊರಬಿಟ್ಟಿರಲಿಲ್ಲ. ಇದೇ ಕಾರಣಕ್ಕೆ ಮತ್ತೆ ಆಗಸ್ಟ್ ತಿಂಗಳಲ್ಲೂ ಮಳೆ ಮುಂದುವರಿದಾಗ ಪ್ರವಾಹ ಏರ್ಪಟ್ಟಿತು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಕಾರಣಕ್ಕೆ ಹಿಂದೆಂದೂ ಕಾಣದ ನೆರೆ ಸಂಕಷ್ಟಕ್ಕೆ ಕೇರಳದ ಜನ ಒಳಗಾದರು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.