Select Your Language

Notifications

webdunia
webdunia
webdunia
webdunia

ಕೇರಳ ಪ್ರವಾಹ: ನಿರಾಶ್ರಿತರ ಕೇಂದ್ರದಲ್ಲಿರುವಾಗಲೇ ನಡೆಯಿತು ಮದುವೆ!

ಕೇರಳ ಪ್ರವಾಹ: ನಿರಾಶ್ರಿತರ ಕೇಂದ್ರದಲ್ಲಿರುವಾಗಲೇ ನಡೆಯಿತು ಮದುವೆ!
ತಿರುವನಂತಪುರಂ , ಸೋಮವಾರ, 20 ಆಗಸ್ಟ್ 2018 (09:05 IST)
ತಿರುವನಂತಪುರಂ: ಕೇರಳದಲ್ಲಿ ಪ್ರವಾಹದಿಂದಾಗಿ ಜನ  ದೈನಂದಿನ ಬದುಕು ಸವೆಸುವುದೂ ಕಷ್ಟವಾಗಿದೆ. ಅಂತಹದ್ದರಲ್ಲಿ ನವ ಜೋಡಿಯೊಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ!

ಮಲಪ್ಪುರಂನ ಅಂಜು ಮತ್ತು ಸಾಜು ಎಂಬ ಜೋಡಿ ನಿರಾಶ್ರಿತರ ಕೇಂದ್ರದಲ್ಲಿರುವಾಗಲೇ ಹಸೆಮಣೆಗೆ ಏರಿದೆ. ಅದೂ ಸಮೀಪದ ದೇವಾಲಯವೊಂದರಲ್ಲಿ. ಆ ಮದುವೆಗೆ ನಿರಾಶ್ರಿತರ ಕೇಂದ್ರದಲ್ಲಿದ್ದವರೇ ಬಂಧುಗಳಾಗಿ ಸಾಕ್ಷಿಯಾದರು.

ಮೂರು ದಿನಗಳಿಂದ ಈ ಜೋಡಿ ಇಲ್ಲಿನ ಶಾಲೆಯೊಂದರಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. ಮಳೆಯಿಂದಾಗಿ ಮದುವೆ ಮುಂದೂಡುವ ಯೋಚನೆಯಲ್ಲಿದ್ದ ಜೋಡಿಗೆ ನಿರಾಶ್ರಿತರ ಕೇಂದ್ರದಲ್ಲಿದ್ದ ಸದಸ್ಯರ ಉತ್ತೇಜನ ಸಿಕ್ಕಿತು. ಹೀಗಾಗಿ ಅಲ್ಲಿದ್ದ ತಮ್ಮ ಬಂಧುಗಳ ಸಾಕ್ಷಿಯಾಗಿ ಇಬ್ಬರೂ ಸಮೀಪದ ದೇವಾಲಯದಲ್ಲಿ ಸರಳವಾಗಿ ಮದುವೆಯಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಐದು ದಿನಗಳ ಕಾಲ ಕೇರಳ ನಿಟ್ಟುಸಿರು