Publish Date: Sat, 02 Jun 2018 (13:34 IST)
Updated Date: Sat, 02 Jun 2018 (13:35 IST)
ಬೆಂಗಳೂರು: ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರವನ್ನು ಅಂಗವಿಕಲ ಮಗುವಿಗೆ ಹೋಲಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ‘ಇದೊಂದು ಅಂಗವಿಕಲ ಸರ್ಕಾರ. ಅಂಗವಿಕಲ ಮಗು ಹುಟ್ಟಿದೆ. ಇದಕ್ಕೆ ಎರಡು ಕೈ, ನಾಲ್ಕು ಕಾಲು, ಹೊಟ್ಟೆ ಇನ್ನೆಷ್ಟೋ.. ಇದು ಹೆಚ್ಚು ದಿನ ಬದುಕಿರಲ್ಲ. ಹಾಗಿದ್ದರೂ ಅದನ್ನು ಬದುಕಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.