Select Your Language

Notifications

webdunia
webdunia
webdunia
webdunia

ಚುನಾವಣೆ : ರಾಜ್ಯ ಸಂಪುಟ ವಿಸ್ತರಣೆ

ಚುನಾವಣೆ
ಬೆಂಗಳೂರು , ಶನಿವಾರ, 12 ಫೆಬ್ರವರಿ 2022 (11:52 IST)
ಬೆಂಗಳೂರು : ಮಾರ್ಚ್ವರೆಗೂ ಸಂಪುಟ ವಿಸ್ತರಣೆ ಬೇಡ. ಆ ಬಳಿಕವೇ ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ಸರ್ಜರಿ ಮಾಡಬಹುದು ಎಂದು ಬಿಜೆಪಿ ಹೈಕಮಾಂಡ್ನಿಂದ ಖಚಿತ ಸಂದೇಶ ಬಂದಿದೆ.

ಹಾಗೆಯೇ ನಿಶ್ಚಿಂತೆಯಿಂದ ಆಡಳಿತ ನಡೆಸಿಕೊಂಡು ಹೋಗುವುದರ ಜತೆಗೆ ಉತ್ತಮ ಬಜೆಟ್ ಮಂಡಿಸುವಂತೆ ಸಿಎಂಗೆ ವರಿಷ್ಠರು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ದಿಲ್ಲಿ ಪ್ರವಾಸ ಕೈಗೊಂಡಿದ್ದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜಕೀಯ ಬೆಳವಣಿಗೆ ವಿಚಾರವಾಗಿಯೂ ಚರ್ಚಿಸಿದ್ದರು. ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತನಾಡುವಂತೆ ಸೂಚಿಸಿದ್ದರು.

ಅದರಂತೆ ನೇರವಾಗಿ ನಡ್ಡಾ ಭೇಟಿ ಸಾಧ್ಯವಾಗದಿದ್ದರೂ ಫೋನ್ ಮೂಲಕ ಸಿಎಂ ಮಾತನಾಡಿದ್ದರು. ಒಂದೆರಡು ದಿನದಲ್ಲಿ ಮತ್ತೆ ಮಾತನಾಡುವುದಾಗಿ ಸಿಎಂಗೆ ನಡ್ಡಾ ಹೇಳಿದ್ದರು.

 


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಮಾಡಿಸಿಲ್ಲವೆಂದು ತಂದೆಯ ಪ್ರಾಣ ತೆಗೆದ ಮಗ