Select Your Language

Notifications

webdunia
webdunia
webdunia
webdunia

ಮೋದಿ, ರಾಹುಲ್ ಮುಖಾಮುಖಿ!

ಮೋದಿ, ರಾಹುಲ್ ಮುಖಾಮುಖಿ!
ಡೆಹ್ರಾಡೂನ್ , ಗುರುವಾರ, 10 ಫೆಬ್ರವರಿ 2022 (12:35 IST)
ಡೆಹ್ರಾಡೂನ್ : ಉತ್ತರಾಖಂಡ ವಿಧಾನಸಭಾ ಚುನಾವಣೆಯ  ದಿನಾಂಕ ಸಮೀಪಿಸುತ್ತಿದ್ದಂತೆ ಇಲ್ಲಿ ರಾಜಕೀಯ ತಳಮಳ ತೀವ್ರಗೊಳ್ಳುತ್ತಿದೆ.
 
ಸದ್ಯ ಚುನಾವಣಾ ಪ್ರಚಾರ ಜೋರಾಗಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ರಾಜ್ಯದಿಂದ ಹಿಡಿದು ಕೇಂದ್ರದವರೆಗೆ ಎಲ್ಲಾ ನಾಯಕರು ಈ ನಿಟ್ಟಿನಲ್ಲಿ ಶಕ್ತಿ ಮೀರಿ ಯತ್ನಿಸುತ್ತಿದ್ದಾರೆ.

ಏತನ್ಮಧ್ಯೆ, ಗುರುವಾರ, ಪ್ರಧಾನಿ ನರೇಂದ್ರ ಮೋದಿ ಅವರು ದೇವಭೂಮಿಯ ಮತದಾರರನ್ನು ತಮ್ಮ ಪರ ಸೆಳೆಯಲು ಶ್ರೀನಗರ ಗಡ್ವಾಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಹಿಂದೆ ಅವರು ರಾಜ್ಯದ ಹಲವು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅಲ್ಲದೇ ಇಲ್ಲಿ ಅವರು ಈಗಾಗಲೇ ವರ್ಚುವಲ್ ರ್ಯಾಲಿ ಮಾಡಲಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ಭೌತಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೋನ್‌ ಆಮದು ನಿಷೇಧಿಸಿದ ಕೇಂದ್ರ