Select Your Language

Notifications

webdunia
webdunia
webdunia
webdunia

30 ಸಾವಿರ ರೂ. ಕೊಟ್ಟು ಪಿಜ್ಜಾ ತಿನ್ನುವರಿಗೇ ಏನು ಗೊತ್ತಾಗುತ್ತೆ? ಕೇಂದ್ರ ಸಚಿವರು ಹೀಗೆ ಹೇಳಿದ್ದೇಕೆ?

ಗಿರಿರಾಜ್ ಸಿಂಗ್
ನವದೆಹಲಿ: ತನ್ನ ಇಲಾಖೆಯಲ್ಲಿ ಉದ್ಯೋಗ ಸೃಷ್ಟಿಯಾಗಿದ್ದು, 30 ಸಾವಿರ ಕೊಟ್ಟು ಪಿಜ್ಜಾ ಬರ್ಗರ್ ತಿನ್ನುವವರಿಗೆ ಹೇಗೆ ಕಾಣುತ್ತದೆ ಎಂದು ಕೇಂದ್ರ ಸಣ್ಣ ಕೈಗಾರಿಕೋದ್ಯಮ ಸಚಿವ ಗಿರಿರಾಜ್ ಸಿಂಗ್ ಲೇವಡಿ ಮಾಡಿದ್ದಾರೆ.

ನನ್ನ ಇಲಾಖೆಯಲ್ಲಿ 12 ಸಾವಿರ ರೂ. ವೇತನ ಸಿಗುವಂತಹ ಉದ್ಯೋಗ ಸೃಷ್ಟಿಯಾಗಿದೆ. ಉದ್ಯೋಗ ಸೃಷ್ಟಿಯಾಗಿಲ್ಲ ಎನ್ನುವವರಿಗೆ ನಾನು ಈ ಮೂಲಕ ಉತ್ತರ ಕೊಡುತ್ತಿದ್ದೇನೆ. ಬಡತನವೆಂದರೆ ಏನೆಂದೇ ಗೊತ್ತಿಲ್ಲದವರು ಹೀಗೆಲ್ಲಾ ಹೇಳಬಹುದು ಎಂದು ಸಚಿವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

30 ಸಾವಿರ ರೂ. ಕೊಟ್ಟು ಪಿಜ್ಜಾ ತಿನ್ನುವವರಿಗೆ 12 ಸಾವಿರ ರೂ. ಲೆಕ್ಕವೇ ಅಲ್ಲದಿರಬಹುದು ಎಂದು ಟಾಂಗ್ ನೀಡಿರುವ ಸಚಿವ ಗಿರಿರಾಜ್ ಸಿಂಗ್, ತನ್ನ ಇಲಾಖೆಯಲ್ಲಿ 10 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಭೇಟಿ ಬಳಿಕ ಇಂದು ಸಿದ್ದರಾಮಯ್ಯ ರಾಜಧಾನಿಗೆ ವಾಪಸ್