Select Your Language

Notifications

webdunia
webdunia
webdunia
webdunia

ಉಮೇಶ್ ಕತ್ತಿ ಟೀಮ್ ಜತೆ ಬೊಮ್ಮಾಯಿ ಸಭೆ?

ಉಮೇಶ್ ಕತ್ತಿ ಟೀಮ್ ಜತೆ ಬೊಮ್ಮಾಯಿ ಸಭೆ?
ಬೆಂಗಳೂರು , ಶನಿವಾರ, 29 ಜನವರಿ 2022 (08:36 IST)
ಈ ಸಮಾರಂಭಕ್ಕೂ ಮುನ್ನ ಉಮೇಶ್ ಕತ್ತಿ ನೇತೃತ್ವದ ಟೀಮ್ ಜತೆ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ದಾರೆ.

ಬೆಂಗಳೂರಿನ ರೇಸ್​ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಭೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುದಾನ ಬಗ್ಗೆ ಚರ್ಚೆ ಮಾಡಲಾಗಿದೆ.

ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಮಹಾಂತೇಶ್ ಕವಟಗಿಮಠ, ಮಹದೇವಪ್ಪ ಯಾದವಾಡ, ಅಭಯ್ ಪಾಟೀಲ್, ಅನಿಲ್ ಬೆನಕೆ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಜಾರಕಿಹೊಳಿ ಸೋದರರು ಮತ್ತು ಟೀಮ್ ಸಭೆಯಿಂದ ದೂರ ಉಳಿದಿದೆ. ಬೆಳಗಾವಿಯ ಬಿಜೆಪಿ ಶಾಸಕರ ನಡೆ ಭಾರಿ ಕುತೂಹಲ ಮೂಡಿಸಿದೆ.

ಇತ್ತೀಚೆಗೆ ಜಾರಕಿಹೊಳಿ ಬ್ರದರ್ಸ್ ದೂರವಿಟ್ಟು ಸಭೆ ನಡೆಸಿದ್ದ ಕತ್ತಿ, ಇಂದು ಜಾರಕಿಹೊಳಿ ಬ್ರದರ್ಸ್ ದೂರವಿಟ್ಟು ಬೊಮ್ಮಾಯಿ ಭೇಟಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಾದಯಾತ್ರೆಯೇ ಕಾಂಗ್ರೆಸ್​ನ ಅಂತ್ಯಯಾತ್ರೆ ಆಯ್ತ!?