Select Your Language

Notifications

webdunia
webdunia
webdunia
webdunia

ರೈತ ನಾಯಕರ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದ ಸಂಸದ ಗೋವಿಂದ ಕಾರಜೋಳ ಗರಂ

ರೈತ ನಾಯಕರ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದ ಸಂಸದ ಗೋವಿಂದ ಕಾರಜೋಳ ಗರಂ
ಬೆಂಗಳೂರು , ಬುಧವಾರ, 30 ಮೇ 2018 (12:31 IST)
ಬೆಂಗಳೂರು: ವಿಧಾನಸೌಧದ ಹಾಲ್ ನಲ್ಲಿ ನಡೆಯುತ್ತಿರುವ ರೈತ ನಾಯಕರೊಂದಿಗಿನ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ರೈತ ನಾಯಕ ರಂಗಸ್ವಾಮಿ ವಿರುದ್ಧ ಬಿಜೆಪಿ ಸಂಸದ ಗೋವಿಂದ ಕಾರಜೋಳ ಗರಂ ಆದ ಪ್ರಸಂಗ ನಡೆದಿದೆ.

ರೈತರ ಸಾಲಮನ್ನಾ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ರಂಗಸ್ವಾಮಿ ಕೇಂದ್ರ ಸರ್ಕಾರ ಕಪ್ಪು ಹಣ ವಿದೇಶದಿಂದ ತರುತ್ತೇವೆ ಎಂದು ನಾಲ್ಕು ವರ್ಷವಾಯಿತು. ಬರೀ ಸುಳ್ಳು ಹೇಳಿ ಮೋಸ ಮಾಡಿದೆ ಎಂದು ರಂಗಸ್ವಾಮಿ ಹೇಳಿದ್ದಕ್ಕೆ ಸಂಸದ ಕಾರಜೋಳ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿ ರೈತರ ಸಾಲಮನ್ನಾ ವಿಚಾರ ಮಾತ್ರ ಮಾತನಾಡಿ. ವಿಷಯಾಂತರ ಮಾಡಬೇಡಿ. ಅನಗತ್ಯವಾಗಿ ಕೇಂದ್ರದ ವಿರುದ್ಧ ಮಾತನಾಡಬೇಡಿ ಎಂದು ಕಾರಜೋಳ ಸಿಟ್ಟಿನಿಂದಲೇ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಜತೆ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ