Select Your Language

Notifications

webdunia
webdunia
webdunia
webdunia

ಮಂಗಳೂರು ಮಳೆ ಬಗ್ಗೆ ಸಿಎಂ ಎಚ್ ಡಿಕೆ, ಬಿಎಸ್ ವೈ ಮತ್ತಿತರರು ಏನು ಹೇಳಿದ್ದಾರೆ ನೋಡಿ

ಮಂಗಳೂರು ಮಳೆ ಬಗ್ಗೆ ಸಿಎಂ ಎಚ್ ಡಿಕೆ, ಬಿಎಸ್ ವೈ ಮತ್ತಿತರರು ಏನು ಹೇಳಿದ್ದಾರೆ ನೋಡಿ
ಮಂಗಳೂರು , ಬುಧವಾರ, 30 ಮೇ 2018 (10:24 IST)
ಮಂಗಳೂರು: ಪೂರ್ವ ಮುಂಗಾರಿನ ಅಬ್ಬಾರಕ್ಕೆ ತತ್ತರಿಸಿರುವ ಮಂಗಳೂರಿನ ಜನತೆಗೆ ಸಿಎಂ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತಿತರು ಸಹಾಯ ಹಸ್ತ ಚಾಚಿದ್ದಾರೆ.

ಮಹಾ ಮಳೆಯಿಂದ ಮಂಗಳೂರು ಸಂಪೂರ್ಣ ಜಲಾವೃತಗೊಂಡ ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಸಿಎಂ ಕುಮಾರಸ್ವಾಮಿ, ಅಗತ್ಯ ಪರಿಹಾರ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೂಡಾ ಮಹಾ ಮಳೆಯ ಬಗ್ಗೆ ಟ್ವೀಟ್ ಮಾಡಿದ್ದು, ಕೇಂದ್ರ ಗೃಹಸಚಿವರಿಗೆ ವಿಷಯ ತಿಳಿಸಿದ್ದೇನೆ. ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದಿದ್ದಾರೆ.

ನಟ, ಬಿಜೆಪಿ ನಾಯಕ ಜಗ್ಗೇಶ್ ಕೂಡಾ ತಮ್ಮ ಟ್ವಿಟರ್ ಮೂಲಕ ಮಳೆಗೆ ಸಂಕಷ್ಟಕ್ಕೀಡಾಗಿರುವ ಜನರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದು, ನಮ್ಮಿಂದ ಸಾಧ್ಯವಾದ ಎಲ್ಲಾ ಸಹಾಯ ಮಾಡೋಣ ಎಂದು ಕರೆಕೊಟ್ಟಿದ್ದಾರೆ.

ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಪರಿಹಾರ ಕಾರ್ಯ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ ಇಂದು ಮತ್ತೆ ಶುರುವಾಯ್ತು ಮಳೆ ಅಬ್ಬರ